ಕುರಿಹಟ್ಟಿ ತೋಟದ ಮನೆಗೆ ಕುಡಿಯಲು ನೀರು ಕೊಡಿ

ಹುಳಿಯಾರು

     ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರಿಹಟ್ಟಿಯ ಮೈಲಾರಯ್ಯ ತೋಟದಮನೆ ಸುತ್ತಮುತ್ತಲ ನಿವಾಸಿಗಳಿಗೆ ಹಾಗೂ ದನಕರುಗಳಿಗೆ ಕುಡಿಯಲು ನೀರು ಕೊಡುವಂತೆ ಇಲ್ಲಿನ ನಿವಾಸಿ ಕೆ.ಎಲ್.ಮಂಜುನಾಥ್ ಮನವಿ ಮಾಡಿದ್ದಾರೆ.

    10 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿ ಸಿಸ್ಟನ್ ಮೂಲಕ ಇಲ್ಲಿನ ನಿವಾಸಿಗಳಿಗೆ ಹಾಗೂ ದನಕರುಗಳಿಗೆ ಕುಡಿಯಲು ನೀರು ಕೊಡಲಾಗುತ್ತಿತ್ತು. 10 ವರ್ಷಗಳಿಂದಲೂ ಯಾವುದೇ ತೊಂದರೆಯಿಲ್ಲದೆ ಸಮಪರ್ಕವಾಗಿ ನೀರು ಪೂರೈಕೆಯಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ತಿಂಗಳಿಂದ ಮೋಟರ್ ತೊಂದರೆಯಿಂದ ನೀರಿನ ಸಮಸ್ಯೆ ಸೃಷ್ಠಿಯಾಗಿದೆ ಎಂದು ವಿವರಿಸಿದರು.

      ಗ್ರಾಮ ಪಂಚಾಯ್ತಿಯಿಂದ ನಾಲ್ಕೈದು ತಿಂಗಳಿಂದ ನಾಲ್ಕೈದು ಬಾರಿ ಮೋಟರ್ ರೆಡಿ ಮಾಡಿ ಬಿಟ್ಟಿದ್ದರೂ ಮತ್ತೆಮತ್ತೆ ಕೆಟ್ಟು ಹೋಗುತ್ತಿದೆ. ಈ ಮೋಟರ್ 10 ವರ್ಷಗಳ ಹಳೆಯ ಮೋಟರ್ ಆಗಿರುವುದರಿಂದ ಪದೇ ಕೆಟ್ಟು ಹೋಗುತ್ತಿದ್ದು ಹೊಸ ಮೋಟರ್ ಅಳವಡಿಸುವ ಅಗತ್ಯವಿದೆ. ಆದರೆ ಗ್ರಾಮ ಪಂಚಾಯ್ತಿ ಪಿಡಿಓ ನಮ್ಮಲ್ಲಿ ಅಷ್ಟೋಂದು ಹಣವಿಲ್ಲ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.
ಹಾಗಾಗಿ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ತಾಪಂ ಸದಸ್ಯರನ್ನು ಹೊಸ ಮೋಟರ್ ಬಿಡುವಂತೆ ಕೇಳಿಕೊಂಡರೂ ಸಹ ಗ್ರಾಪಂ ಕೇಳಿ ಬಿಡಿಸಿಕೊಳ್ಳಿ ಎಂದು ನಿರ್ಲಕ್ಷ್ಯಿಸುತ್ತಿದ್ದಾರೆ. ಹಾಗಾಗಿ ಪ್ರಸ್ತುತ ಮೋಟರ್ ಕೆಟ್ಟಿದ್ದು ಪದೆಪದೇ ರೆಡಿ ಮಾಡಿಸಿ ಸೋತಿರುವ ಗ್ರಾಪಂ ಪುನಃ ರೆಡಿ ಮಾಡಿಸಲು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.

       ಹಾಗಾಗಿ ನೀರಿನ ಹಾಹಾಕಾರ ಹೆಚ್ಚಿದ್ದು ಕುಡಿಹಟ್ಟಿ ಗ್ರಾಮಕ್ಕೆ ಬಂದು ನಿರು ತರುವ, ತೋಟದ ಮಾಲೀಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆ ಸೃಷ್ಠಿಯಾಗಿದೆ. ತಹಶಿಲ್ದಾರ್ ಅವರು ಬರ ಪರಿಹಾರ ಹಣದಲ್ಲಿ ಹೊಸ ಮೋಟರ್ ಅಳವಡಿಸಿ ಇಲ್ಲಿನ ನಿವಾಸಿಗಳಿಗೆ ಕುಡಿಯಲು ನೀರು ಸಿಗುವಂತೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link