ಚಿತ್ರದುರ್ಗ:
ಸಾಹಿತಿ ಡಾ.ಬಿ.ಎಲ್.ವೇಣುರವರ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರದುರ್ಗದ ಒನಕೆ ಓಬವ್ವ ಚಿತ್ರವನ್ನು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಒನಕೆ ಓಬವ್ವಳ ವಂಶಸ್ಥರೊಂದಿಗೆ ಯೂನಿಯನ್ ಚಿತ್ರಮಂದಿರದಲ್ಲಿ ವೀಕ್ಷಿಸಿದರು.
ಚಿತ್ರದುರ್ಗದ ಒನಕೆ ಓಬವ್ವ ಚಿತ್ರವನ್ನು ವೀಕ್ಷಿಸಿದ ನಂತರ ಮಾತನಾಡಿದ ಬಸವನಾಗಿದೇವಸ್ವಾಮಿ ಒನಕೆಯಿಂದ ಶತ್ರುಗಳನ್ನು ಸದೆಬಡಿದು ತ್ಯಾಗ, ಸಾಹಸ, ಬಲಿದಾನಗಳ ಮೂಲಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬ್ವಳ ಅಸ್ಮಿತೆಯನ್ನು ಗೌರವಿಸುವು ದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಈ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದರು.
ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ ಬಸವನಾಗಿದೇವಸ್ವಾಮಿಗಳು ಚಿತ್ರದುರ್ಗ ದ ಒನಕೆ ಓಬವ್ವ ಚಿತ್ರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರಶಸ್ತಿಯನ್ನು ಪಡೆಯಲಿ ಎಂದು ಹಾರೈಸಿದರು.ಒನಕೆ ಓಬವ್ವ ವಂಶಸ್ಥರಾದ ರವಿಕುಮಾರ್, ಸೋಮಶೇಖರ್ ಹಾಗೂ ಛಲವಾದಿ ಗುರುಪೀಠದ ಭಕ್ತರು ಚಿತ್ರ ವೀಕ್ಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
