ಹುಳಿಯಾರು ಇತಿಹಾಸದ ಪಳೆಯುಳಿಕೆ ಸಂರಕ್ಷಿಸಿ

ಹುಳಿಯಾರು

    ಹುಳಿಯಾರು ಪಟ್ಟಣದ ಇತಿಹಾಸ ಸಾರುವ ಪಳೆಯುಳಿಕೆಯು ಇಲ್ಲಿನ ರಾಮಗೋಪಾಲ್ ಸರ್ಕಲ್ ಬಳಿ ಹಾಳಾಗುತ್ತಿದ್ದರು ಸಂಬಂಧಪಟ್ಟವರು ಗಮನ ಹರಿಸದಿರುವುದಕ್ಕೆ ಇಲ್ಲಿನ ನಿವಾಸಿಗಳಾದ ಎಲ್.ಆರ್.ಬಾಲಾಜಿ, ಧನಂಜಯ್, ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಹುಳಿಯಾರು ನಗಡಿಯನ್ನು ಸೂಚಿಸುವ ಹಾಗೂ ಜನಸಂಖ್ಯೆಯನ್ನು ನಮೂದಿಸಿರುವ ಐತಿಹಾಸಿಕ ಕಲ್ಲು ಪಟ್ಟಣದ ರಾಮಗೋಪಾಲ್ ವೃತ್ತದಲ್ಲಿ 1929 ರಲ್ಲಿ ನಿರ್ಮಿಸಲಾಗಿತ್ತು. ಅಂದಿನಿಂದಲೂ ಇಲ್ಲಿಯವರೆವಿಗೂ ಪಟ್ಟಣದ ಇತಿಹಾಸವನ್ನು ಜನರಿಗೆ ನೆನಪಿಸುತ್ತಿತ್ತು.
ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇದೇ ವೇಳೆ ಇತಿಹಾಸ ಸಾರುವ ಕಲ್ಲು ಕಿತ್ತು ಹಾಕಲಾಗಿದೆ. ಈಗ ಅನಾಥವಾಗಿ ಮುರಿದು ಬಿದ್ದಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಪಟ್ಟಣ ಪಂಚಾಯತಿಯವರು ಇತ್ತ ಗಮನಹರಿಸಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link