ಹಾವೇರಿ:
ಆನೂರ ಕೆರೆ ತುಂಬಿಸುವ ಕುರಿತಂತೆ ಮುಖ್ಯಮಂತ್ರಿಗಳ ಬಳಿ ಜಿಲ್ಲೆಯ ರೈತರ ನಿಯೋಗ ಕೊಂಡೊಯ್ಯವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ವಕ್ಫ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದಖಾನ್ ರೈತರಿಗೆ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆನೂರ ಕೆರೆ ಹೋರಾಟಗಾರ ರೈತರ ನಿಯೋಗದೊಂದಿಗೆ ಮಾತನಾಡಿದ ಸಚಿವರು ನಾನು ಕೊಟ್ಟ ಮಾತಿನಂತೆ ಈಗಾಗಲೇ ಕೆರೆ ತುಂಬಿಸಲು ಎಲ್ಲ ಪ್ರಯತ್ನಗಳನ್ನು ನಡೆಸಿರುವೆ. ನಿಮ್ಮ ಹೋರಾಟದ ಜೊತೆಗೆ ನಾನಿರುವೆ ಎಂದು ತಿಳಿಸಿದರು.
ವಿಧಾನಸಭಾ ಅಧಿವೇಶನ ಇದೇ ಜುಲೈ 10 ರಿಂದ ಆರಂಭಗೊಳ್ಳಲಿದೆ. ಹದಿನೈದನೇ ತಾರೀಖು ಎಲ್ಲ ರೈತ ಮುಖಂಡರು ಬೆಂಗಳೂರಿಗೆ ಬನ್ನಿ. ನಿಮ್ಮೊಂದಿಗೆ ನಾನು ಭಾಗವಹಿಸುವೆ, ಮುಖ್ಯಮಂತ್ರಿಗಳನ್ನು ಹಾಗೂ ಜಲ ಸಂಪನ್ಮೂಲ ಸಚಿವರನ್ನು ಭೇಟಿಮಾಡಿ ಕೆರೆ ತುಂಬಿಸುವ ಅಗತ್ಯತೆ ಹಾಗೂ ಅನುದಾನ ಬಿಡುಗಡೆಗೆ ಮಂಜೂರಾತಿ ಕುರಿತಂತೆ ಮನವಿ ಮಾಡಿಕೊಳ್ಳೋಣ ಎಂಬ ಸಚಿವರ ಮಾತಿಗೆ ರೈತ ಮುಖಂಡರು ಸಹಮತ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
