ನವದೆಹಲಿ:
ರಾಷ್ಟ್ರ ರಾಜಧಾನಿಯ ದೆಹಲಿ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಇಂದು ಕೂಡ ಮುಂದೂಡಲ್ಪಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ . ಗದ್ದಲ ಕಲಹದಿಂದ ಎರಡು ಬಾರಿ ಮುಂದೂಡಿಕೆಯಾಗಿದ್ದ ಮಹಾಪೌರರ ಆಯ್ಕೆಗೆ ಮೂರನೇ ಬಾರಿಗೆ ಕೌನ್ಸಿಲ್ ಸಭೆ ಕರೆಯಲಾಗಿದೆ.
ಈ ವಿಷಯವಾಗಿ ಮಾತನಾಡಿರುವ ಆಪ್ ಸದಸ್ಯರೊಬ್ಬರು ಬಿಜೆಪಿ ದೆಹಲಿಯಲ್ಲಿ ತನ್ನ ಕುತಂತ್ರದಿಂದ ಮೇಯರ್ ಆಗಲು ಯೋಜನೆ ರೂಪಿಸುತ್ತಿದೆ ಅದನ್ನು ನಾವು ಬಿಡುವುದಿಲ್ಲ . ಕೇವಲ ಪ್ರಿಸೈಡಿಂಗ್ ಆಫೀಸರ್ ಆಗಿರುವ ವ್ಯಕ್ತಿ ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸಲು ಯೋಚಿಸುದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಜ. 6 ಹಾಗೂ ಜ. 25ರಂದು ಎರಡು ಬಾರಿ ಮೇಯರ್ ಆಯ್ಕೆಗೆ ಸೇರಿದ್ದ ಕೌನ್ಸಿಲ್ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರ ಮತದಾನ ಹಕ್ಕಿನ ವಿಚಾರವಾಗಿ ಗದ್ದಲ ಕೋಲಾಹಲ ಉಂಟಾಗಿತ್ತು. ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ನೀಡಬಾರದು ಎಂದು ಆಪ್ ಗದ್ದಲ ಮಾಡಿತ್ತು. ಎರಡು ಪಕ್ಷಗಳ ಸಂಘರ್ಷದಿಂದ ಮೇಯರ್ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಆದರೂ ಸಹ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಮತದಾನದ ಹಕ್ಕನ್ನು ನೀಡಿರುವುದು ಸಂಘರ್ಷಕ್ಕೆ ಕಾರಣವಾಗಿದೆ.