ಮಧುಗಿರಿ:
ಇತ್ತೀಚೆಗೆ ವಿಧಾನ ಪರಿಷತ್ನಲ್ಲಿ ಸದಸ್ಯರಾದ ರಾಜೇಂದ್ರ ರಾಜಣ್ಣ ಪಟ್ಟಣದ ಒಳಚರಂಡಿಯ ಕಳಪೆ ಕಾಮಗಾರಿ ಹಾಗೂ ಅಗಸರಹೊಳೆ ಸಮೀಪದ ಸೇತುವೆ ಕಾಮಗಾರಿ ಸರಿಪಡಿಸುವಂತೆ ಸರಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಕಾಮಗಾರಿಗಳು ಬಹಳ ಬಿರುಸಿನಿಂದ ಸಾಗಿವೆ.
ಕಳೆದ 4 ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಯನ್ನು ಆರಂಭಿಸಲಾಗಿತ್ತು ಆದರೆ ಕಾಮಗಾರಿಯು ಆಮೆ ಗತಿಯಿಂದ ಸಾಗುತ್ತಿತ್ತು. ಇದರಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು ಹಾಗೂ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಸಹ ವ್ಯಕ್ತವಾಗಿದ್ದವು.
ಪಠ್ಯ ಪರಿಷ್ಕರಣೆ: ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ
ಕೆಲ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಚೊಳೇನಹಳ್ಳಿ ಕೆರೆಯ ನೀರು ಬಿಜಾವರದ ಕೆರೆಗೆ ಸಾಗುವ ಮಾರ್ಗ ಮಧ್ಯದ ಅಗಸರ ಹೊಳೆಯ ಸಮೀಪ ಮಳೆಯ ನೀರು ಹೆಚ್ಚಾಗಿ ಹರಿಯಿತು. ಪರಿಣಾಮ ಸೇತುವೆ ಹಾನಿಯಾಗಿ ಬೃಹತ್ ವಾಹನಗಳ ಸಾಗಾಟ ಸಂಪೂರ್ಣ ಸ್ತಭ್ದವಾಗಿತ್ತು. ಸಣ್ಣ ಪುಟ್ಟ ವಾಹನ ಸವಾರರಿಗೂ, ಪಾದಚಾರಿಗಳಿಗೂ ತೊಂದರೆ ಉಂಟಾಗಿ ರಸ್ತೆ ಕಿರಿದಾಗಿದ್ದರಿಂದ ಅವಘಡಗಳು ಸಂಭವಿಸಿದ್ದವು. ಈ ಬಗ್ಗೆ ಸಂಬಂಧಪಟ್ಟವರಿಗೆ ಸರಿಪಡಿಸುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನ ಕಂಡಿರಲಿಲ್ಲ.
ಈ ಬಗ್ಗೆ ರಾಜೇಂದ್ರರವರು ಸದನದಲ್ಲಿ ಸಂಬಂಧಪಟ್ಟ ಸಚಿವರ ಹಾಗೂ ಸರಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಒಳ ಚರಂಡಿ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಮುಂದಾಗಿದ್ದು, ಸಾರ್ವಜನಿಕರು ಈಗ ನಿಟ್ಟ್ಟುಸಿರು ಬಿಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
