ಕ್ಯಾತ್ಸಂದ್ರ :ಲೋಕಾಯುಕ್ತ ಬಲೆಗೆ ಎ ಎಸ್‌ ಐ ಮತ್ತು ಮುಖ್ಯ ಪೇದೆ

ತುಮಕೂರು:

     ಕ್ಯಾತ್ಸಂದ್ರ ಪೊಲೀಸ್ ಠಾಣೆಯ ASI ಗುರುಮಲ್ಲರಾಧ್ಯ 10000 ರೂ, HC ನಾಗರಾಜು 500 ರೂ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಶವಗಾರದ ಬಳಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್, ಪಿ ಐ ಗಳಾದ ಸತ್ಯನಾರಾಯಣ ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿಮತ್ತು ಸಿಬ್ಬಂದಿ ವರ್ಗ ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

      ಅಪಘಾತಕ್ಕೊಳಗಾಗಿದ್ದ ವಾಹನ ಒಂದನ್ನು ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಎ ಎಸ್ ಐ ಮತ್ತು ಮುಖ್ಯಪೇದೆ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

     ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ. 28ರಂದು ನಡೆದ ಅಪಘಾತ ಪ್ರಕರಣ ಒಂದರ ವಾಹನ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದನ್ನಲಾಗಿದೆ.ಆರಾಧ್ಯ ಮತ್ತು ನಾಗರಾಜು ಎಂಬುವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸುವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap