ಗುರುಗ್ರಾಮದ ವ್ಯಕ್ತಿಯಿಂದ ಪತ್ನಿ ವಿರುದ್ಧ ಮಾನಸಿಕ ಕಿರುಕುಳದ ಆರೋಪ

ಗುರುಗ್ರಾಮ:

   ಬೆಂಗಳೂರಿನ ಅತುಲ್ ಸುಭಾಷ್ ಆತ್ಮಹತ್ಯೆಯ ಬೆನ್ನಲ್ಲೇ ಮತ್ತೋರ್ವ ವ್ಯಕ್ತಿ ತನ್ನ ಪತ್ನಿಯು 1 ಕೋಟಿ ಮೊತ್ತದ ಹಣವನ್ನು ಪರಿಹಾರವಾಗಿ ಮತ್ತು ತಿಂಗಳಿಗೆ 1.5 ಲಕ್ಷ ರೂ.ಗಳ ನಿರ್ವಹಣೆಗೆ ಬೇಡಿಕೆಯಿಡುತ್ತಿದ್ದಾಳೆ ಎಂದು ಹೇಳಿಕೊಂಡು ತನ್ನ ಸಂಕಷ್ಟವನ್ನು ಮುಂದಿಟ್ಟಿದ್ದಾರೆ. ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಅಲೋಕ್ ಮಿತ್ತಲ್ ಲಿಂಕ್ಡ್‌ಇನ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಳ್ಳು ವರದಕ್ಷಿಣೆ ಪ್ರಕರಣಗಳು ಮತ್ತು ಕೌಟುಂಬಿಕ ಹಿಂಸೆಯ ಮೂಲಕ ಆಕೆ ತನಗೆ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಿದ್ದಾರೆ.

   ಮಾನ್ಸಿ ಸ್ವಲ್ಪ ಸಮಯದ ನಂತರ ಅಲೋಕ್ ಜೊತೆ ಇರಲು ಬೆಂಗಳೂರಿಗೆ ಬರುವುದಾಗಿ ಭರವಸೆ ನೀಡಿದಳು. ಅಲೋಕ್ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ದೆಹಲಿಗೆ ಹೋದಾಗ ಮಾನ್ಸಿಯ ಪೋಷಕರು ಅವನ ಬಗ್ಗೆ ಅಸಡ್ಡೆ ತೋರಿದರು. ಮಾನ್ಸಿ ಅಲೋಕ್‌ಗೆ ಬೆಂಗಳೂರಿನಲ್ಲಿ ಕೆಲಸ ಬಿಡುವಂತೆ ಒತ್ತಾಯಿಸಿದಳು.
 
   ಅಲೋಕ್ ಹೆಂಡತಿ ಮಾನ್ಸಿ ಕೂಡ ಉದ್ಯೋಗದಲ್ಲಿದ್ದು, ತಿಂಗಳಿಗೆ 80,000 ರೂ. ಗಳಿಸುತ್ತಾರೆ. ಉತ್ತಮ ಗಳಿಕೆಯಿದ್ದರೂ ಮಾನ್ಸಿ 1.5 ಲಕ್ಷ ರೂ. ಹಣವನ್ನು ನಿರ್ವಹಣೆ ಹಾಗೂ ಒಂದು ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ ಎಂದು ಅಲೋಕ್ ಆರೋಪಿಸಿದ್ದಾರೆ.

ತನ್ನ 10 ತಿಂಗಳ ಮಗನನ್ನು ಭೇಟಿಯಾಗಲು ತನ್ನ ಅತ್ತೆ ಮತ್ತು ಹೆಂಡತಿ ಬಿಡುತ್ತಿಲ್ಲ ಎಂದು ಕೂಡ ಅಲೋಕ್ ಆರೋಪಿಸಿದ್ದಾರೆ.