ಹಗರಿಬೊಮ್ಮನಹಳ್ಳಿ:
ತಾಲೂಕಿನ ಅಲಬೂರು ವಲಯದ ಹಳೇ ನೆಲ್ಕುದ್ರಿಯ ಅಂಗನವಾಡಿ ಕೆಂದ್ರದಲ್ಲಿ ಆರೋಗ್ಯ ಪೌಷ್ಠಿಕ ಆಹಾರ ಸೇವನೆ ಕುರಿತು ಮಹಿಳೆಯರಿಗಾಗಿ ಮಂಗಳವಾರ ಸಭೆ ಜರುಗಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡ ಕರಿಗೇರಿ ಚಂದ್ರಪ್ಪ ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಠಿಕ ಆಹಾರವನ್ನು ಸೇವನೆಮಾಡಬೇಕು. ಇದರಿಂದ ನಿಮ್ಮ ಮಗುವಿನಲ್ಲಿ ಉತ್ತಮ ಆರೋಗ್ಯ ನಿರೀಕ್ಷಿಸಲು ಸಾಧ್ಯ. ಹೆಚ್ಚೆಚ್ಚು ಸೊಪ್ಪು, ತರಕಾರಿಯನ್ನು ಸೇವಿಸಿ ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎಂದರು.
ವಲಯದ ಮೇಲ್ವಿಚಾರಕಿ ಬಸಮ್ಮ ತಾಯಿಯ ಎದೆಯ ಹಾಲಿನ ಮಹತ್ವ, ಮಗುವಿನ ಹಾರೈಕೆ ಮತ್ತು ಇಲಾಖೆಗಳಿಂದ ದೊರೆಯುವ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಗೀತಾ ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎನ್.ಕೊಟ್ರೇಶ, ವರಕೇರಿ ಕೊಟ್ರೇಶ್, ಮುಖ್ಯ ಶೀಕ್ಷಕರಾದ ಗುರುಬಸವರಾಜ್, ವಲಯ ವ್ಯಾಪ್ತಿಯ ಕಾರ್ಯಕರ್ತೆಯರಾದ ಚನ್ನಮ್ಮ, ಗಿರಿಜಮ್ಮ, ವೀರಮ್ಮ, ಗಾಯತ್ರಿ, ಸ್ವಪ್ನ, ಹಾಲಮ್ಮ ಮತ್ತು ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರು ಪಾಲ್ಗೊಂಡಿದದ್ರು.
ಕೇಂದ್ರದ ಕಾರ್ಯಕರ್ತೆ ಎಚ್.ಎಂ.ಸುಜಾತ ಸ್ವಾಗತಿಸಿ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
