ದಟ್ಟ ಮಂಜಿನಿಂದ ಕಾಲುವೆಗೆ ಉರುಳಿದ ಕಾರು : 6 ಮಂದಿ ಸಾವು!!

ನೋಯ್ಡಾ:

      ದಟ್ಟ ಮಂಜಿನಿಂದಾಗಿ ರಸ್ತೆಯಿಂದ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು 6 ಮಂದಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ತಡರಾತ್ರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಿಂದ ವರದಿಯಾಗಿದೆ.

     ಮೃತರನ್ನು ಮಹೇಶ್ (35), ಕಿಶನ್ಲಾಲ್ (50), ನೀರೇಶ್ (17), ರಾಮ್ ಖಿಲಾಡಿ (75), ಮಲ್ಲು (12), ನೇತ್ರಪಾಲ್ (40) ಎಂದು ಗುರುತಿಸಲಾಗಿದೆ.

     ಮಾರುತಿ ಎರ್ಟಿಗಾ ಕಾರಿನಲ್ಲಿ 11 ಮಂದಿ ತೆರಳುತ್ತಿದ್ದಾಗ ನಿನ್ನೆ ರಾತ್ರಿ 11.30ರಲ್ಲಿ ಡಂಕೌರ್ ಪ್ರದೇಶದ ಖೇರ್ಲಿ ಕಾಲುವೆಗೆ ವಾಹನ ಉರುಳಿ ಬಿತ್ತು ಎಂದು ಪೊಲೀಸ್‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸಾವಿಗೀಡಾವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಐವರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

      ರಾಷ್ಟ್ರ ರಾಜಧಾನಿಯಲ್ಲಿ ದಟ್ಟವಾದ ಮಂಜು ಆವರಿಸಿದೆ. ಶೂನ್ಯದಿಂದ 100 ಮೀಟರ್ ನಡುವೆ ಗೋಚರತೆಯನ್ನು ದಾಖಲಿಸಲಾಗಿದೆ. ದಟ್ಟಮಂಜಿನಿಂದಾಗಿ ದೃಶ್ಯತೆ ಪ್ರಮಾಣ ಅತ್ಯಲ್ಪವಾಗಿದ್ದುದೇ ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap