ಬೆಂಗಳೂರು:
ಬೆಂಗಳೂರು,ಮಾ.29- ಬ್ರಾಹ್ಮಣರು, ಲಿಂಗಾಯಿತರು ಮತ್ತು ದಲಿತರ ಇತಿಹಾಸ ಕುರಿತಂತೆ ವಿಧಾನಸಭೆಯಲ್ಲಿಂದು ಬಿಸಿಬಿಸಿ ಚರ್ಚೆ ನಡೆಯಿತು.
ಕೃಷಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ಸಂದರ್ಭದಲ್ಲಿ ಸಚಿವ ಬಿ.ಸಿ.ಪಾಟೀಲ್ ಅವರು, ರಾಜ್ಯ ಸರ್ಕಾರ ಯಂತ್ರೋಪಕರಣಗಳು, ಟ್ರ್ಯಾಕ್ಟರ್, ಡೀಸೆಲ್ ಖರೀದಿಗೆ ಸಬ್ಸಿಡಿ ನೀಡುತ್ತದೆ.
ಆದರೆ ನಾಡಗೌಡ ಅವರಂತಹ ಜಮೀನುದಾರರು ಈ ಸಬ್ಸಿಡಿ ಹಣ ದುರುಪಯೋಗವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ಎಂದಿದ್ದು ಚರ್ಚೆಗೆ ಗ್ರಾಸವಾಯಿತು.
ರೈತರಿಗೆ ನೀಡುವ ಒಂದೊಂದು ರೂಪಾಯಿ ಕೂಡ ಅತ್ಯಂತ ಅಮೂಲ್ಯವಾಗಿರುತ್ತದೆ. ಲಕ್ಷಾಂತರ ರೈತರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದಿಂದ ಒಟ್ಟು 10 ಸಾವಿರ, ಯಂತ್ರೋಪಕರಣಗಳು, ಟ್ರಾಕ್ಟರ್, ಡೀಸೆಲ್ ಮೇಲಿನ ಖರೀದಿಗೆ ಸಬ್ಸಿಡಿ ಕೊಡುತ್ತೇವೆ. ಆದರೆ ನಾಡಗೌಡರಂತಹ ಆಸ್ತಿವಂತರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್ಕುಮಾರ್, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗಿನಿಂದ ಯಾರೂ ಹೆಚ್ಚು ಜಮೀನು ಹೊಂದುವಂತಿಲ್ಲ. ನೀವು ಹೇಳುವ ಪ್ರಕಾರ ಅವರು ಜಮೀನು ಇಟ್ಟುಕೊಂಡರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆ. ಟ್ರಾಕ್ಟರ್, ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಹಣವನ್ನು ಕೊಡುತ್ತದೆ. ವಾಸ್ತವವಾಗಿ ಇದು ರೈತರಿಗೆ ಸೇರುತ್ತದೆಯೇ ಎಂಬುದು ನಾವು ಅವಲೋಕನ ಮಾಡಬೇಕು. ನಿಮ್ಮ ಅಧಿಕಾರಿಗಳು ಯಂತ್ರೋಪಕರಣಗಳನ್ನು ರತ್ನಗಿರಿ ಟ್ರೇಡರ್ಸ್ ಬಿಟ್ಟು ಆಚೆ ಎಲ್ಲಿ ಖರೀದಿಸಿದ್ದಾರಾ? ಸ್ವಲ್ಪ ದಯವಿಟ್ಟು ಸಚಿವರು ನೋಡಬೇಕು ಎಂದರು.
ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ, ಉತ್ಪನ್ನಗಳನ್ನು ಭಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ
ನಾಡಗೌಡರು ಹೆಚ್ಚಿನ ಆಸ್ತಿ ಹೊಂದಿದ್ದರೆ ಅದು ಕಾನೂನು ಬಾಹಿರವಾಗುತ್ತದೆ. ಇದರ ಬಗ್ಗೆ ತನಿಖೆ ಕೂಡ ನಡೆಸಬೇಕಾಗುತ್ತದೆ. ನೀವು ಸಚಿವ ಸ್ಥಾನದಲ್ಲಿ ನಿಂತು ಹೇಳಿದ್ದೀರಿ. ಅದಕ್ಕೆ ಬದ್ದರಾಗಬೇಕಾಗುತ್ತದೆ ಎಂದು ಹೇಳಿದರು.
ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾಡಗೌಡರು ಹೆಸರಿಗೆ ಗೌಡರಾಗಿರಬಹುದು. ಗೌಡರಾದವರೆಲ್ಲರೂ ಶ್ರೀಮಂತರಾಗಿರುವು ದಿಲ್ಲ. ಇಲ್ಲವೇ ಜಮೀನು ಹೊಂದಿರುವುದಿಲ್ಲ. ನನ್ನ ಅನೇಕ ಸ್ನೇಹಿತರು ಸಂಪತ್ ಅಯ್ಯಂಗಾರ್ ಎಂಬುವರು ಇದ್ದರು. ಹೆಸರಲ್ಲಿ ಮಾತ್ರ ಸಂಪತ್ತು ಇರುತ್ತಿತ್ತು. ಅವರು ಕೂಡ ಭಾನುವಾರ, ಸೋಮವಾರದ ವಕೀಲರಾಗಿದ್ದರು ಎಂದರು.
‘ಹಿಂದೂ ಮಟನ್ ಅಂಗಡಿ’ಯಲ್ಲಿ ‘ಮುಸ್ಲೀಂ’ ಮಾಂಸ ಖರೀದಿಸ್ತಾರಾ.? – ಸಿ.ಟಿ ರವಿ ಪ್ರಶ್ನೆ
ಈ ವೇಳೆ ರಮೇಶ್ಕುಮಾರ್ ಮತ್ತೆ ಮಾತು ಮುಂದುವರೆಸಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದು ಮಾಜಿ ಸಚಿವ ಬಿ.ವಿ.ರಾಚಯ್ಯ ಅವರನೊಂದಿಗೆ ಚರ್ಚೆ ನಡೆಸುತ್ತಿದ್ದರು. ಬ್ರಾಹ್ಮಣರಿಗೆ 5000 ವರ್ಷಗಳ ಇತಿಹಾಸವಿದೆ. ಲಿಂಗಾಯಿತರಿಗೆ 800 ವರ್ಷಗಳ ಇತಿಹಾಸವಿದೆ. ದಲಿತರಿಗೆ ಸಂವಿಧಾನ ಬಂದ ಮೇಲೆ ಇತಿಹಾಸ ಬಂದಿದೆ.
ಬ್ರಾಹ್ಮಣರು ಯಾವಾಗಲೂ ಒಂದಿಲ್ಲೊಂದು ಕಾರಣಕ್ಕಾಗಿ ಮೇಧಾವಿಗಳೇ ಎಂದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಾಡಗೌಡರು ಮೊದಲು ಅವಿಭಜಿತ ಕುಟುಂಬದಲ್ಲಿದ್ದಾಗ ಹೆಚ್ಚು ಆಸ್ತಿ ಹೊಂದಿರಬಹುದೇನೋ ಈಗ ವಿಭಜಿತರಾದ ಮೇಲೆ ಕಡಿಮೆ ಆಸ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಬಂದ ಮೇಲೆ ಯಾರೊಬ್ಬರೂ ಹೆಚ್ಚು ಆಸ್ತಿ ಹೊಂದುವಂತಿಲ್ಲ. ಒಂದು ವೇಳೆ ಯಾರಾದರೂ ಹೆಚ್ಚು ಆಸ್ತಿ ಹೊಂದಿದ್ದರೆ ಸಿದ್ದರಾಮಯ್ಯನವರಂತಹ ವಕೀಲರು ಸಲಹೆ ಕೊಟ್ಟಿರುತ್ತಾರೆ ಎಂದು ಸಿಎಂ ಕಾಲೆಳೆದರು.
ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ..?? – ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ
ಇದಕ್ಕೆ ತಕ್ಷಣವೇ ಎದ್ದು ನಿಂತ ಸಿದ್ದರಾಮಯ್ಯ, ಯಾರೋ ವಕೀಲರು ಸಲಹೆ ಕೊಡಬಹುದು. ನನ್ನಂಥವರು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಆಗ ಸಚಿವ ಗೋವಿಂದ ಕಾರಜೋಳ ಅವರು, ಗೌಡ, ಸಂಪತ್ತು ಹೆಸರು ಇಟ್ಟುಕೊಂಡವರಲ್ಲ ಶ್ರೀಮಂತರಾಗಿರಲು ಸಾಧ್ಯವಿಲ್ಲ. ಈಗಲೂ ಅನೇಕ ಜನ ವರ್ಷಗಳಿಂದಲೂ ಉಪಕಸುಬು ನಂಬಿಕೊಂಡೇ ಜೀವನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೂ ಇದು ಸಾದ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
12ನೇ ಶತಮಾನದಲ್ಲೇ ಬಸವಣ್ಣನವರು ಸಮಸಮಾಜ ನಿರ್ಮಿಸಲು ಮುಂದಾದರು. ಅನುಭವ ಮಂಟಪ ಸ್ಥಾಪಿಸಿದರು. ಆ ಮಂಟಪಕ್ಕೆ ಹಿಂದುಳಿದವರನ್ನು ಸಿಂಹಾಸನದ ಮೇಲೆ ಕೂರಿಸಿದ್ದರು ಎಂದು ಸ್ಮರಿಸಿದರು.
ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ರೂಪ : ಬಿಎಡ್ ಇನ್ನೂ 5 ವರ್ಷ!
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ,ಹಿಂದುಳಿದವರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದಕ್ಕೆ ಅವರನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದರು ಎಂದರು. ಸಮಸಮಾಜ ನಿರ್ಮಾಣವಾಗಿದ್ದರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಏಕೆ ಮತಾಂತರವಾಗುತ್ತಿದ್ದರು ಎಂದು ಪ್ರಶ್ನಿಸಿದರು.
ಆಗ ಕಾರಜೋಳ, ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ನಾವು ಸಮಾಜದ ಅಂಕುಡೊಂಕು ತಿದ್ದಿ ವ್ಯವಸ್ಥೆಯನ್ನು ಬದಲಾಯಿಸಬೇಕು. ಎಲ್ಲವನ್ನೂ ಮೆಟ್ಟಿ ನಿಂತಾಗಲೇ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
