ತುಮಕೂರು:
ತತ್ವ ಫೌಂಡೇಶನ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತುಮಕೂರು, ಹಾಗೂ ಸಿದ್ಧಗಂಗಾ ತಾಂತ್ರಿಕ ಮಹಾ ವಿಶ್ವವಿದ್ಯಾಲಯದ, NSS ಎಸ್ಐಟಿ ಘಟಕದ ವತಿಯಿಂದ ದಿನಾಂಕ 12 11 2021 ರಂದು ಸಿದ್ದಗಂಗಾ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಥಮ-ಚಿಕಿತ್ಸಾ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಒ ಓ ಚೆನ್ನಬಸಪ್ಪ ನಿರ್ದೇಶಕರು ಸಿದ್ದಗಂಗಾ ತಾಂತ್ರಿಕ ಸಂಸ್ಥೆ ನೆರವೇರಿಸಿದರು. ಅಪಘಾತ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚುತ್ತಿದ್ದು ಸಾವು-ನೋವುಗಳು ಸಂಭವಿಸುತ್ತಿದೆ. ಇಂತಹ ನೋವುಗಳನ್ನು ಕಡಿಮೆಮಾಡಲು ಅತಿಮುಖ್ಯವಾಗಿ ಪ್ರಥಮ ಚಿಕಿತ್ಸೆ ಪ್ರತಿಯೊಬ್ಬ ಪ್ರಜೆಗಳಿಗೂ ಅತ್ಯಗತ್ಯವಾಗಿದೆ. ಇಂತಹ ತರಬೇತಿ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಎಸ್ ನಾಗಣ್ಣ ನವರು ಸಭಾಪತಿಗಳು ಕರ್ನಾಟಕ ರಾಜ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಗಮಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು ಹಾಗೂ ಮಾತನಾಡುತ್ತಾ ಪ್ರಥಮ ಚಿಕಿತ್ಸೆಯ ಪ್ರತಿಯೊಬ್ಬ ವ್ಯಕ್ತಿಗೆ ಅನಿರೀಕ್ಷಿತ ಸಮಯದಲ್ಲಿ ಅವಶ್ಯಕತೆ ಇದೆ. ಆದುದರಿಂದ ಅತಿ ವೇಗವಾಗಿ ಅವಶ್ಯಕತೆಯೇ ಸಾಗುತ್ತಿರುವ ಈ ಜಗತ್ತಿಗೆ ಸಂರಕ್ಷಣೆಗೆ ಅಪಘಾತ ಹಾಗೂ ಪ್ರಕೃತಿ ವಿಕೋಪಗಳು ನೈಸರ್ಗಿಕ ಸಮಸ್ಯೆಗಳಿಂದ ತುರ್ತಾಗಿ ಸಂಬಂಧಿಸಲು ಪ್ರಥಮ ಚಿಕಿತ್ಸೆಯ ಅವಶ್ಯಕತೆ ತುಂಬಾ ಇದೆ. ಅತಿ ಮುಖ್ಯವಾಗುತ್ತದೆ ಇದನ್ನು ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಮತ್ತು ಹಲವು ವಿಶ್ವವಿದ್ಯಾಲಯಗಳು ಕೈಗಾರಿಕ ಶಿಕ್ಷಣ ಸಂಸ್ಥೆಗಳು ಇತರೆ
ತರಬೇತಿ ನೀಡುತ್ತಿರುವುದು ಸಂತೋಷವಾದ ವಿಷಯ ಹಾಗೂ ತೃಪ್ತಿ ಕಾರ್ಯವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಸಂಸ್ಥೆಯ ಡಾಕ್ಟರ್ ಶಿವಕುಮಾರ ಶ್ರೀಯುತ ಬಿಆರ್ ಉಮೇಶ್ ನಿರ್ದೇಶಕರು ಯುವ ರೆಡ್ ಕ್ರಾಸ್ ಹಾಗೂ ಅಧ್ಯಕ್ಷರು ತತ್ವ ಫೌಂಡೇಶನ್ ತುಮಕೂರು ಕಾರ್ಯಕ್ರಮಕ್ಕೆ ವಂದನೆಗಳನ್ನು ತಿಳಿಸಿದರು. ಡಾಕ್ಟರ್ ಅಪರ್ಣ ಪ್ರಸನ್ನ ನಿರ್ದೇಶಕರು ಪ್ರಥಮ ಚಿಕಿತ್ಸೆ ರೆಡ್ ಕ್ರಾಸ್ ಕಮಿಟಿ ತುಮಕೂರು, ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಅರುಣ್ ಎಸ್ ಬಿ , ಕೆಂಪರಾಜು, ಲಕ್ಷ್ಮೀಶ್ ಪ್ರಸಾದ್, ರಕ್ಷಿತ್ ಎಂ ಎಸ್, ಸಿಆರ್ ನಟರಾಜ್ ಹಾಗೂ ತರಬೇತಿಯನ್ನು ಆನಂದ್ ಬೆಂಗಳೂರು ಹಾಗೂ ಮನು ಕೊಪ್ಪ ರೆಡ್ ಕ್ರಾಸ್, ತುಮಕೂರು ರವರು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
