ಗುಬ್ಬಿ:
ಹಿಂದೂಗಳನ್ನು ಕೊಂದ ಪಾಕೀಸ್ತಾನಿ ಬೆಂಬಲಿತ ಹಂದಿಗಳಿಗೆ ಧಿಕ್ಕಾರ ಕೂಗಿ ಮಾತನಾಡಿದ ಜೆ ಡಿ ಎಸ್ ಮುಖಂಡ ಜಿ ಡಿ ಸುರೇಶ್ ಗೌಡ ಈ ದೇಶ ಹಿಂದೆಂದೂ ಕಂಡರಿಯದ ಘೋರ ಕೊಲೆ ಇದಾಗಿದ್ದು ಧರ್ಮ ಕೇಳಿ ಕೊಂದ ಭಯೋತ್ಪಾದಕರನ್ನು ನಮ್ಮ ಹೆಮ್ಮೆಯ ಸೈನ್ಯ ಎಂದಿಗೂ ಬಿಡಬಾರದು ಅವರನ್ನು ಗುಂಡಿಕ್ಕಿ ಕೊಂದರೆ ಮಾತ್ರ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು,
ಕಾಶ್ಮೀರದ ನಲ್ಲಿ ನೆಡೆದ ದಾಳಿಯಲ್ಲಿ ಮರಣ ಹೊಂದಿದದವರಿಗೆ ಇಂದು ಗುಬ್ಬಿ ವೀರಣ್ಣ ಸರ್ಕಲ್ ನಲ್ಲಿ ಗುಬ್ಬಿಯ ವಿವಿಧ ಸಂಘ ಸಂಸ್ಥೆಯವರು ಕ್ಯಾಂಡಲ್ ಹಚ್ಚುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ ಜೆ ಪಿ ಮುಖಂಡ ಚಂದ್ರಶೇಖರ್ ಬಾಬು ಮಾತನಾಡಿ ಕಳ್ಳ ಮಾರ್ಗಗಳಿಂದ ನುಸುಳಿ ಬರುವ ಭಯೋತ್ಪಾದಕರಿಗೆ ನಮ್ಮ ಸೈನಿಕರು ಸರಿಯಾಗಿ ಉತ್ತರಿಸಲಿದ್ದಾರೆ ನುಸುಳುವುದಿರಲಿ ಇದರ ಯೋಚನೆ ಮಾಡಿದರೆ ಹೃದಯಾಘಾತವಾಗಬೇಕು
ಹಾಗೆ ಮಾಡುತ್ತಾರೆ ಎಂದ ಅವರು ಶಾಂತಿಯಿಂದಿರುವ ಈ ದೇಶದ ಹಿಂದುಗಳ ಮನಸ್ಥಿತಿ ಕದಡಲು ಮಾಡಿರುವ ಷಡ್ಯಂತ್ರ ಎಂದರು, ಈಗಾಗಲೇ ಗೃಹ ಮಂತ್ರಿ ಅಮಿತ್ ಶಾ ಕರೆ ಕೊಟ್ಟಿದ್ದು ನಮ್ಮ ಸೈನಿಕರು ಈ ಕೃತ್ಯಕ್ಕೆ ಕಾರಣರಾದ ಒಬ್ಬೊಬ್ಬ ಭಯೋತ್ಪಾದಕರನ್ನು ಸದೆಬಡಿಯುತ್ತಾರೆ ಎಂದರು
ಈ ಕಾರ್ಯಕ್ರಮ ದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ ಆರ್ ಶಿವಕುಮಾರ್, ಜಿಲ್ಲಾ ಪಂಚಾಯ್ತಿ ಸಿ ಆರ್ ಶಂಕರ್ ಕುಮಾರ್, ಟಿ ಎಸ್ ಶಿವಮೂರ್ತಿ, ವಿರೂಪಾಕ್ಷ, ವೀರಶೈವ ಸಮಾಜದ ಅಧ್ಯಕ್ಷ ಕೆ ಕಾಂತರಾಜು, ವಾಟಾಳ್ ನಾಗರಾಜು,ಅರ್ಜುನ್ , ಡಿ ರಘು, ವಸಂತ್ ಹೇರೂರು,ಪ್ರಮೋದ್, ಕೀರ್ತಿರಾಜ್, ವರ್ತಕರ ಸಂಘದ ಅಧ್ಯಕರಾದ ದಯಾನಂದಮೂರ್ತಿ, ಅಖಿಲ ಭಾರತ ವೀಶೈವ ಮಹಾಸಭಾದ ತಾಲೂಕು ಅಧ್ಯಕ್ಶ ಮಂಜುನಾಥ್, ಪ್ರಮೋದ್ ಜಿ ಸಿ, ಹಾಗೂ ಇನ್ನು ಇತರರು ಭಾಗವಹಿಸಿದ್ದರು
