ಬೆಂಗಳೂರು:
ಎದುರಾಳಿಯ ವಿರುದ್ದ ಸೇಡಿ ತೀರಿಸಿಕೊಳ್ಬೇಕಾದ್ರೆ ಒಂದಷ್ಟು ಮಂದಿ ಗ್ಯಾಂಗ್ ಕಟ್ಟಿಕೊಂಡ್ ಅಟ್ಯಾಕ್ ಮಾಡೋದನ್ನ ನೋಡಿದ್ದೇವೆ. ಮನ ಬಂದಂತೆ ಕೊಚ್ಚೋದನ್ನ ಕಂಡಿದ್ದೇವೆ. ಆದ್ರೆ ಇಲ್ಲೊಂದ್ ಗ್ಯಾಂಗ್ ಎದುರಾಳಿಯ ಮೇಲೆ ಸೇಡು ತೀರಿಸಿಕೊಳ್ಳದಕ್ಕೆ ಖತರ್ನಾಕ್ ಪ್ಲಾನ್ ಮಾಡಿದ್ದರು.
ಪೊಲೀಸರ ದಾಳಿ ವೇಳೆ ಸೀಜ್ ಆಯ್ತು 19 ಪೆಟ್ರೋಲ್ ಬಾಂಬ್ ಗಳು..!
ಬಂಧಿತರಲ್ಲಿ ಈ ಫಯಾಜುಲ್ಲ ಇದಾನಲ್ಲ ಈತನೇ ಇಡೀ ಕೇಸ್ ನ ಮಾಸ್ಟರ್ ಮೈಂಡ್. ಈತನಿಗೂ ರೌಡಿ ಅಜೀವುಲ್ಲಾಖಾನ್ ಗೂ ಆಗ್ತಾ ಇರಲಿಲ್ಲ. ಯಾಕಂದ್ರೆ ಫಯಾಜ್ ಈ ಹಿಂದೆ ಸಾರಾಯಿಪಾಳ್ಯದಲ್ಲಿದ್ದ ಮನೆಯನ್ನ 35 ಲಕ್ಷಕ್ಕೆ ಮಾರಾಟ ಮಾಡಿದ್ದ. ಈ ವೇಳೆ 25 ಲಕ್ಷ ಹಣವನ್ನು ಪಡೆದಿದ್ದ. ಆದ್ರೆ ಕೊನೆಗೆ ಮತ್ತೆ ಹತ್ತು ಲಕ್ಷ ಹೆಚ್ಚುವರಿಯಾಗಿ ಕೊಡುವಂತೆ ಬೇಡಿಕೆ ಇಟ್ಟಿದ್ದ ಆಗ್ಲೆ ಈ ಅಜೀವುಲ್ಲಾಖಾನ್ ಬಂದು ರೌಡಿಸಂ ಮಾಡಿ ಫಯಾಜ್ ನ ಮನೆ ಖಾಲಿ ಮಾಡಿಸಿದ್ದ. ಆಗ್ಲಿಂದ ಇಬ್ಬರ ಮಧ್ಯೆ ಮನಸ್ತಾಪ ಬೆಳೆದಿತ್ತು.
ಇನ್ನು ಆರೋಪಿಗಳು ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ್ರು, ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಸ್ಕೆಚ್ ಹಾಕಿದ್ರು ಅಂತ ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿತ್ತು. ಆದ್ರೆ ನ್ಯೂಸ್ ೧೮ ಕನ್ನಡ ಮಾತ್ರ ವಾಸ್ತವ ತೋರಿಸಿತ್ತು. ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡೋವಾಗ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳಿಗೆ ಡಿಸಿಪಿ ವಾರ್ನ್ ಸಹ ಮಾಡಿದ್ರು.
ಒಟ್ನಲ್ಲಿ ಪೆಟ್ರೋಲ್ ಬಾಂಬ್ ಹಾಕೋ ಉದ್ದೇಶ ಇತ್ತೋ ಇಲ್ಬೋ ಗೊತ್ತಿಲ್ಲ, ಆದ್ರೆ ಮಾಹಿತಿ ಗೊತ್ತಾಗಿದ್ದೇ ಕಾರ್ಯಪ್ರವೃತ್ತರಾಗಿ ಹೆಣ್ಣೂರು ಪೊಲೀಸರು ಮಾಡಿದ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಮಾಡಿದ್ದಾರೆ.
![](https://prajapragathi.com/wp-content/uploads/2022/05/Capture-124.jpg)