ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಮಂತ್ರಿ ಸ್ಥಾನ : ಬೆಂಬಲಿಗರಿಂದ ಆಗ್ರಹ

ನಾಯಕನಹಟ್ಟಿ :

   ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಜ್ಯದ ಉನ್ನತಿಗಾಗಿ ಮುಂಬರುವ ಸಚಿವ ಸಂಪುಟದಲ್ಲಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಮಂತ್ರಿ ಸ್ಥಾನ ನೀಡುವಂತೆ ಕೆ.ಡಿ.ಪಿ. ಸದಸ್ಯ ಜಾಕೀರ್ ಹುಸೇನ್ ಮನವಿ ಮಾಡಿಕೊಂಡರು.

   ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತತ ೭ ಬಾರಿ ಶಾಸಕರಾಗಿ ಆಯ್ಕೆಯಾದ ಚಿತ್ರದುರ್ಗ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮದೇ ಆದ ರಾಜಕೀಯ ಛಾಪುವನ್ನು ಮೂಡಿಸಿರುವ ಜೊತೆಗೆ ರಾಜ್ಯ ರಾಜಕೀಯದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಜ್ಯದ ಉನ್ನತಿಗಾಗಿ ಹಾಗೂ ಎನ್.ವೈ.ಗೋಪಾಲಕೃಷ್ಣರವರ ಕಾರ್ಯವೈಖರಿಗಳು, ಪ್ರಮಾಣೀಕತೆ, ನಿಷ್ಠೆ ಹಾಗೂ ಶುದ್ಧ ಹಸ್ತರು ಎಲ್ಲವನ್ನು ಪರಿಗಣಿಸುವುದರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನವನ್ನು ನೀಡುವಂತೆ ಒತ್ತಾಹಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುದಿಯಪ್ಪ ಇದ್ದರು. 

Recent Articles

spot_img

Related Stories

Share via
Copy link