ಗುಬ್ಬಿ :
ಹಲವು ಸಾಮಾಜಿಕ, ಥಾರ್ಮಿಕ ಹಾಗೂ ಆರ್ಥಿಕ ಸಹಕಾರದ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶಾದ್ಯಾಂತ ಹೆಸರು ಪಡೆದಿದೆ ಇದರ ಜೊತೆ ಶಾಶ್ವತವಾದ ಕಾಮಗಾರಿಯಾದ ಕೆರೆ ಹೊಳೆತ್ತುವ ಕಾಮಗಾರಿಯನ್ನು ನಿರಂತರವಾಗಿ ನಡೆಸುತ್ತಿದ್ದು ಈವರೆಗೆ ತಾಲ್ಲೂಕಿನಲ್ಲಿ 3 ಕೆರೆಗಳ ಹೊಳೆತ್ತುವಲ್ಲಿ ಯಶಸ್ವಿಯಾಗಿದ್ದು ತಾಲ್ಲೂಕಿನ ಕೋಣನಕೆರೆ ಕೆರೆ ಹೊಳೆತ್ತುವ ಕಾಮಗಾರಿಗೆ ಶ್ರೀಕ್ಷೇತ್ರದಿಂದ 13,83,000 ರೂ ಬಿಡುಗಡೆಯಾಗಿದ್ದು ಕಾಮಗಾರಿಗೆ ಊರಿನ ಗ್ರಾಮಸ್ಧರು ಮತ್ತು ಅಕ್ಕ-ಪಕ್ಕದ ಗ್ರಾಮಸ್ಧರು ಕೈ ಜೋಡಿಸಿದರೆ ಕೆರೆ ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದೆಂದು ಯೋಜನೆಯ ಜಿಲ್ಲಾ ನಿರ್ದೆಶಕರಾದ ದಯಾಶೀಲ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಣನಕೆರೆ ಕೆರೆ ಹೊಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆರೆಯಿಂದ ಮೇಲೆತ್ತುವ ಹೊಳನ್ನು ರೈತರು ತಮ್ಮ ಜಮೀನಿಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದು ಹಾಗೂ ಹೂಳೆತ್ತಿದ್ದ ಮೇಲೆ ಗ್ರಾಮಸ್ಧರು ಮತ್ತು ಜನಪ್ರತಿನಿಧಿಗಳು ಸೇರಿ ಇದಕ್ಕೆ ನೀರು ತುಂಬಿಸುವ ಕೆಲಸವಾಗಬೇಕು ಕೆರೆ ಭರ್ತಿಯಾದರೆ ಈ ಭಾಗದ ಕೃಷಿಗೆ ಮತ್ತು ಪಶು-ಪಕ್ಷಿಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಗುಬ್ಬಿ ತಾಲೂಕಿನಲ್ಲಿ ಗ್ರಾಮಾಭಿವೃಧ್ದಿ ಯೋಜನೆಯಿಂದ ಕೆರೆ ಹೊಳೆತ್ತುವ ಕಾಮಗಾರಿಗಳ ಪೈಕಿ ಇದು 4ನೇ ಕೆರೆಯಾಗಿದ್ದು ಈಗಾಗಲೇ 3 ಕೆರೆಗಳ ಹೊಳೆತ್ತುವ ಮಾಲಕ ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜ್ಯಾದಾಧ್ಯಂತ ಯೋಜನೆಯಿಂದ ಈವರೆಗೆ 240 ಕೆರೆಗಳ ಹೋಳೆತ್ತುವ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ಇದು 241 ನೇ ಕೆರೆಯಾಗಿದೆ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಆರ್.ಎಸ್.ಹರೀಶ್ ಮಾತನಾಡಿ, ಕೆರೆ ಹೂಳೆತ್ತುವ ಕಾರ್ಯ ಒಂದು ಪೂಣ್ಯದ ಕಾರ್ಯ ಇಂಥಹ ಮಹತ್ವದ ಕಾರ್ಯವನ್ನು ಯೋಜನೆಯಿಂದ 2016 ರಿಂದ ಪೂಜ್ಯ ಹೆಗ್ಗಡೆಯವರು ನಡೆಸಿಕೊಂಡು ಬರುತ್ತಿದ್ದು ಇದರ ಜೊತೆಗೆ ವಿವಿಧ ಸಮಾಜ ಸೇವಾ ಕಾರ್ಯಗಳು ಮತ್ತು ಧಾರ್ಮಿಕ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ಪುಟ್ಟಣ್ಣ ಮಾತನಾಡಿ, ಕೆರೆ ಹೊಳೆತ್ತುವ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಧಳದಿಂದ ಪ್ರಸಾದ ರೂಪದಲ್ಲಿ 13,83,000 ಹಣ ಬಂದಿದ್ದು ಈ ಮೊತ್ತವನ್ನು ಸದುಪಯೋಗ ಮಾಡಿಕೊಂಡು ಊರಿನ ಕೆರೆಯನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಕೆರೆ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಕೆರೆ ಹೂಳೆತ್ತುವ ಪೂಣ್ಯದ ಕೆಲಸ ಮಾಡುತ್ತಿದ್ದು ಕೆಲಸ ಆದ ಮೇಲೆ ಹೇಮವತಿ ಚಾನೆಲ್ ಮೂಲಕ ಕೆರೆಗೆ ನೀರು ಹರಿಸುವ ಪ್ರಯತ್ನ ಮಾಡಲಾಗುವುದು. ಇದರಿಂದ ಈ ಭಾಗದ ಸುಮಾರು 4 ಗ್ರಾಮಗಳ ಕೃಷಿ ಜಮೀನಿಗೆ ಮತ್ತು ಪಶು ಪಕ್ಷಿಗಳಿಗೆ ಅನುಕೂಲವಾಗುತ್ತದೆ.ಅಲ್ಲದೆ ಅಂತರ್ಜಲ ಹೆಚ್ಚಳವಾಗಲಿದೆ ಇದಕ್ಕೆ ಸಮಿತಿಯವರು ಮತ್ತು ಊರಿನವರ ಸಹಕಾರ ಅತ್ಯಗತ್ಯವಾಗಿದ್ದು ಎಲ್ಲರ ಸಹಕಾರದೊಂದಿಗೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ತಾಲೂಕು ಪಂಚಾಯತ್ ಸದಸ್ಯೆ ಗಿರಿಜಮ್ಮ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್, ಕಲಾವತಿ, ಜಯಲಕ್ಷ್ಮಮ್ಮ, ಪಿಡಿಒ ಮಂಜುಳ, ಇಂಜಿನಿಯರ್ ಭರತ್, ಮೇಲ್ವಿಚಾರಕ ಚಂದ್ರಶೇಖರ್, ಕೃಷಿ ಮೇಲ್ವಿಚಾರಕ ಸತೀಶ್, ಮುಖಂಡ ಜುಂಜೇಗೌಡ ಸೇರಿದಂತೆ ಸೇವಾಪ್ರತಿನಿಧಿಗಳು, ಕೆರೆ ಸಮಿತಿ ಸದಸ್ಯರು, ಸಂಘದ ಸದಸ್ಯರು, ಊರಿನ ಗ್ರಾಮಸ್ಧರು ಉಪಸ್ಧಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
