ತುಮಕೂರು :
ಗುಬ್ಬಿ ಯಲ್ಲಿ ನಡೆಯುತ್ತಿರುವ ಜೆಡಿಎಸ್ ಸೇರ್ಪಡೆ ಸಮಾವೇಶದ ವೇದಿಕೆಯ ಫ್ಲೆಕ್ಸ್ ನಲ್ಲಿ ಹಾಗೂ ಪಟ್ಟಣದ ಲ್ಲಿ ಅಳವಡಿಸಿ ರುವ ಸ್ವಾಗತ ಫ್ಲೆಕ್ಸ್ ಗಳಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಭಾವಚಿತ್ರ ನಾಪತ್ತೆ ಯಾಗಿದ್ದು ಈ ಮೂಲಕ ಜೆಡಿಎಸ್ ತೊರೆಯಲು ಶ್ರೀ ನಿವಾಸ್ ಅವರಿಗೆ ಪಕ್ಷದ ವರಿಷ್ಠ ರೇ ಪರೋಕ್ಷ ಸೂಚನೆ ನೀಡಿದರೆ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಗುಬ್ಬಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷ ಸೇರ್ಪಡೆ ಗೊಳ್ಳುತ್ತಿರುವ ನಾಗರಾಜ್ ಮತ್ತು ಜಿಲ್ಲಾ ಜೆಡಿಎಸ್ ಶಾಸಕರು ಮಾಜಿ ಶಾಸಕ ರ ಭಾವಚಿತ್ರ ಗಳೇ ರಾರಾಜಿಸುತ್ತಿದ್ದು, ಶಾಸಕರ ಭಾವಚಿತ್ರ ವನ್ನು ಉದ್ದೇಶ ಪೂರ್ವಕವಾಗಿ ಕೈ ಬಿಡಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದೆಡೆ ಗುಬ್ಬಿ ಕಾಂಗ್ರೆಸ್ ಮುಖಂಡ ರು ಶಾಸಕ ಶ್ರೀ ನಿವಾಸ್ ಕಾಂಗ್ರೆಸ್ ಸೇರ್ಪಡೆ ಗೆ ವಿರೋಧಿಸುತ್ತಿರುವುದು ಶಾಸಕರ ಮುಂದಿನ ನಡೆಯುವ ಬಗ್ಗೆ ಜಿಜ್ಞಾಸೆ ಗೆ ಎಡೆ ಮಾಡಿದೆ.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕರಾದ ಸಿ. ಬಿ. ಸುರೇಶ್ ಬಾಬು, ಪಿ. ಆರ್. ಸುಧಾಕರ ಲಾಲ್, ಶಾಸಕ ಗೌರಿ ಶಂಕರ್, ಎಂಎಲ್ಸಿ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಆಂಜನಪ್ಪ ಇತರ ಗಣ್ಯರ ಭಾಗಿಯಾಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/07/Gubbi-vasu-jds.jpg)