ಮಧುಗಿರಿ :
ಮಧುಗಿರಿ ಪಟ್ಟಣದಲ್ಲಿನ ಹೈಸ್ಕೂಲ್ ರಸ್ತೆಯ ಎಸ್ ಬಿ ಐ ಶಾಖೆಯಲ್ಲಿ ಹಾಡುಹಗಲೇ ನಿವೃತ್ತ ಶಿಕ್ಷಕರೊಬ್ಬರ 1.75 ಲಕ್ಷ ರೂ ಹಣವನ್ನು ಅಪರಿಚಿತನೊಬ್ಬ ಲಪಟಾಯಿಸಿ ಪರಾರಿಯಾಗಿರುವ ಘಟನೆ ಬುದುವಾರ ನಡೆದಿದೆ.
ಪಟ್ಟಣದ ಕೆ .ಆರ್. ಬಡಾವಣೆ ವಾಸಿ, ನಿವೃತ್ತ ಶಿಕ್ಷಕ ಗಂಗಪ್ಪ ಎಂಬುವರು ತಮ್ಮ ಖಾತೆಗೆ ಹಣ ಪಾವತಿಸಲು ಪ್ಲಾಸ್ಟಿಕ್ ಕವರ್ ನಲ್ಲಿ 1.75 ಲಕ್ಷ ರೂಗಳನ್ನು ಬಂದಿದ್ದರು. ಹಣ ಕಟ್ಟಲು ನಿಂತಿದ್ದ ಸಂದರ್ಭದಲ್ಲಿ ಅಪರಿಚಿತನೊಬ್ಬ ಗಂಗಪ್ಪನವರ ಗಮನವನ್ನು ಬೇರೆಡೆಗೆ ಸೆಳೆದು ಬ್ಲೇಡ್ ಮೂಲಕ ಕವರ್ ಹರಿದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ .ಈ ಘಟನೆಯ ಬಗ್ಗೆ ಸಿಸಿ ಕ್ಯಾಮರರಲ್ಲಿ ಸರಿಯಾಗಿದ್ದು ಮಧುಗಿರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.








