ಇಸ್ಲಾಮಾಬಾದ್:
ಭಾರತದ ಅತಿ ಕುತೂಹಲಕಾರಿಯಾದ ಅಯೋಧ್ಯೆ ರಾಮಜನ್ಮಭೂಮಿಯ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾತನಾಡಿದ್ದು, ಈ ತೀರ್ಪಿನಿಂದಾಗಿ ಭಾರತೀಯ ಮುಸ್ಲಿಮರ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ ಮತ್ತು ಇದು ನ್ಯಾಯ ಸಮ್ಮತವಾಗಿಲ್ಲ ಎಂದರು . ಅಲ್ಲದೇ ಈ ತೀರ್ಪು ಕರ್ತಾರ್ ಪುರ ಕಾರಿಡಾರ್ ನ ಉದ್ಘಾಟನೆ ಸಂದರ್ಭದಲ್ಲೇ ಬಂದಿರುವುದು ಅತೀವವಾದ ಬೇಸರ ತಂದಿದೆ ಎಂದಿದ್ದಾರೆ.
ಇನ್ನು ಸ್ವಲ್ಪದಿನ ಕಾಯ್ದು ನಂತರ ತೀರ್ಪು ಕೊಡಲು ಆಗುತ್ತಿರಲಿಲ್ಲವೇ? ಈ ತೀರ್ಪಿನಿಂದಾಗಿ ಕರ್ತಾರ್ ಪುರ ಕಾರಿಡಾರ್ ನ ಮೇಲಿನ ಗಮನವನ್ನ ಬೇರೆಡೆ ಸೆಳೆದಂತಾಗಿದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಈವರೆಗೂ ವಿವಾದಿತ ಪ್ರದೇಶವಾಗಿದ್ದ ಭೂಮಿಯನ್ನು ರಾಮಲಲ್ಲಾನಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿ ಮುಸ್ಲಿಂ ಸಮುದಾಯಕ್ಕೆ ಮುಜುಗರ ಉಂಟು ಮಾಡಿದೆ ಇದರಿಂದಾಗಿ ನಾವು ಈ ತೀರ್ಪನ್ನು ಒಪ್ಪುವುದಿಲ್ಲಾ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/ayodhya.gif)