ತುಮಕೂರು :
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲು ಬಹುತೇಕ ಬಿಜೆಪಿ ಶಾಸಕರು ವರಿಷ್ಠರತ್ತ ಎಡತಾಕುತ್ತಿದ್ದರೆ, ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಹಿರಂಗ ಪ್ರಕಟಣೆಯನ್ನು ಪೋಸ್ಟ್ ಮಾಡಿ, ಸಚಿವರಾಗುವ ರೇಸ್ನಿಂದ ಸ್ವಯಂ ಹೊರಗುಳಿದಿದ್ದಾರೆ.
“ತತ್ವ ಸಿದ್ದಾಂತಗಳ ಪಕ್ಷ ಬಿಜೆಪಿಯು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದು ಪ್ರಧಾನಿ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಗೆದ್ದು ಮೊದಲ ಬಾರಿ ಶಾಸಕನಾದ ನನ್ನನ್ನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದು ಸಮಂಜಸವೆನಿಸುವುದಿಲ್ಲ. ಪಕ್ಷಕ್ಕಾಗಿ ದುಡಿದ ಹಲವಾರು ಬಾರು ಶಾಸಕರಾದವರುಸಹ ಇನ್ನೂ ಯಾವುದೇ ಉನ್ನತ ಹುದ್ದೆ ಹೊಂದದೇ ಇರುವ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನಕ್ಕೆ ಲಾಭಿ ಮಾಡುವುದು ಸೂಕ್ತವಲ್ಲ. ನಾನು ಆಕಾಂಕ್ಷಿಯೂ ಆಗಿರುವುದಿಲ್ಲ. ಜಿಲ್ಲೆಯಲ್ಲಿ ನನಗಿಂತಲೂ ಪಕ್ಷ ಹಿರಿಯ ನಾಯಕರು ಹಾಗೂ ರಾಜಕೀಯ ಅನುಭವಿಗಳಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಗುಂಪು ಗುಂಪಾಗಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಒತ್ತಾಯಿಸುವುದಾಗಲೀ, ಜಾಲತಾಣಗಳಲ್ಲಿ ಆಕಾಂಕ್ಷಿಯೆಂದು ಬಿಂಬಿಸುವುದಾಗಲೀ ಮಾಡಬಾರದೆಂದು’ ಪೋಸ್ಟ್ನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
