ಸಂವಿಧಾನದ ರಕ್ಷಣೆಗಾಗಿ ನಾವು ಬದ್ದರಾಗಿದ್ದೇವೆ : ಕೆ ಸಿ ವೇಣುಗೋಪಾಲ್

ನವದೆಹಲಿ:

    ಸಂವಿಧಾನದ ರಕ್ಷಣೆಗಾಗಿ ಜನರು ಇಂಡಿಯಾ ಬಣಕ್ಕೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ ಮತ್ತು ಅದಕ್ಕಾಗಿ ಪ್ರತಿಪಕ್ಷಗಳು ಹೋರಾಡಲು ನಿರ್ಧರಿಸಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸೋಮವಾರ ಹೇಳಿದ್ದಾರೆ.

    ಪ್ರಯತ್ನಿಸುತ್ತಿರುವುದರಿಂದ ನಮ್ಮ ಎಲ್ಲಾ ಸದಸ್ಯರಿಗೆ ಸಂವಿಧಾನದ ಪ್ರತಿಯೊಂದಿಗೆ ಬರಲು ಕೇಳಿದ್ದೇವೆ. 400 ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಅವರ ಎಲ್ಲಾ ಮಾತುಗಳು ನೆಲಚ್ಚಿವೆ. ಜನರು ನಮಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಮತ್ತು ಸಂವಿಧಾನವನ್ನು ರಕ್ಷಿಸಲು ನಾವು ಜನರಿಗೆ ನಮ್ಮ ಮಾತನ್ನು ನೀಡಿದ್ದೇವೆ ಎಂದರು.

   ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನದ ಕುರಿತು ಮಾತನಾಡಿದ ಅವರು, ಪ್ರತಿಪಕ್ಷಗಳು ಅದನ್ನು ಪಡೆಯಬೇಕು ಎಂಬುದು ಚರ್ಚೆಯಾಗಿದೆ. ಎರಡು ಯುಪಿಎ ಸರ್ಕಾರಗಳ ಅವಧಿಯಲ್ಲಿ ನಾವು ಅಂದಿನ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನವನ್ನು ನೀಡಿದ್ದೇವೆ. ಈ ಬಾರಿ ಏನಾಗುತ್ತದೋ ನೋಡುತ್ತೇವೆ ಎಂದರು.

    ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕನ ಪಾತ್ರವನ್ನು ವಹಿಸಿಕೊಂಡ ನಂತರ, ನಿರ್ಧಾರವು ಗಾಂಧಿಯವರದ್ದೇ ಆಗಿರಬೇಕು ಎಂದು ಹೇಳಿದರು. ವೇಣುಗೋಪಾಲ್ ಅವರು 2009 ರಿಂದ 2019 ರವರೆಗೆ ಆಲಪ್ಪುಳದಿಂದ ಲೋಕಸಭೆಗೆ ಸತತವಾಗಿ ಎರಡು ಬಾರಿ ಗೆದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link