ಯಾದಗಿರಿ:
ನಾರಾಯಣಪುರದ ಬಸವಸಾಗರ ಜಲಾಶಯದ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.ರೈತರ ಹೋರಾಟಕ್ಕೆ ಮಣಿದ ಸರ್ಕಾರ ನೀರು ಬಿಡುಗಡೆಮಾಡಿದ್ದು ಈ ಕುರಿತು ದರ್ಶನಾಪುರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ರೈತರು ಆತಂಕ ಪಡುವ ಅಗತ್ಯವಿಲ್ಲ, ಸಿಎಂ ಹಾಗೂ ಡಿಸಿಎಂ ರೈತರು ಬಡವರ ಪರವಾಗಿದ್ದಾರೆ ಎಂದಿದ್ದಾರೆ.
ರೈತರ ಸಲಹೆ ಮೇರೆಗೆ ಮಾರ್ಚ್ 22 ರ ತನಕ ನೀರು ಬಿಟ್ಟು ಬಂದ್ ಮಾಡಲಾಗಿತ್ತು ಬಳಿಕ ಇನ್ನು ಎರಡ್ಮೂರು ದಿನ ನೀರು ಬೇಕು ಅಂತ ಹೇಳಿದ್ದರಿಂದ ಮಾರ್ಚ್ 25 ರ ರಾತ್ರಿ ವರೆಗೆ ನೀರು ಬಿಡಲಾಗಿತ್ತು, ನೀರಾವರಿ ಸಲಹ ಸಮಿತಿ ನಿರ್ಧಾರದಂತೆ ನೀರು ಬಿಡಲಾಗಿತ್ತು.
ಸದ್ಯ ಕಾಲುವೆ ಮುಖಾಂತರ ಮೂರು ದಿನಗಳವರೆಗೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಬೀಡಲಾಗುತ್ತಿದ್ದು. ನೀರಿನ ಅವಶ್ಯಕತೆ ಮನಗೊಂಡು ಎಪ್ರಿಲ್ 1 ರಂದು ನಾನು ಶಾಸಕರು ಹಾಗೂ ರೈತ ಮುಖಂಡರು ಡಿಸಿಎಂ ಅವರಿಗೆ ಬೇಟಿಯಾಗಿ ಮನವರಿಕೆ ಮಾಡಿದ್ವಿ, ಡಿಸಿಎಂ ಅವರು ಎಂಡಿ ಜೊತೆ ಮಾತಾಡಿ ಮೂರು ದಿನ ನೀರು ಬಿಡಲು ಹೇಳಿದ್ದಾರೆ ರೈತ ಮುಖಂಡರು ಬೆಳೆಗಳ ಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದಾರೆ, ಆದರೆ ರೈತರು ಯಾರು ಗಾಬರಿ ಪಡುವ ಅವಶ್ಯಕತೆಯಿಲ್ಲ, ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿದ್ದು ನೀರು ಬಿಡಲು ಆದೇಶ ಮಾಡಿದ್ದಾರೆ, ಮುಂದೆ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದಿದ್ದಾರೆ.
