ದರ್ಶನ್-ಯಶ್ ಜೋಡೆತ್ತುಗಳಲ್ಲ ಕಳ್ಳೆತ್ತುಗಳು : ಸಿಎಂ ಕುಮಾರಸ್ವಾಮಿ!!

ಬೆಂಗಳೂರು :  
     ಇತ್ತೀಚೆಗೆ ದರ್ಶನ್​ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ದರ್ಶನ್​ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಮರುಕ್ಷಣವೇ ಪೊಲೀಸರಿಗೆ ಮನೆ ಸಮೀಪ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಬರುವಂತೆ ಹೇಳಿದ್ದೆ. ಆದರೆ, ಸಿಸಿಟಿವಿ ಆಫ್​ ಆಗಿತ್ತು ಎಂದು ದರ್ಶನ್​ ಹೇಳಿದ್ದಾರೆ. ಹಾಗಾದರೆ, ಅದನ್ನು ಆಫ್​ ಮಾಡಿದವರು ಯಾರು? ಮುಂಜಾನೆ ಮೂರು ಗಂಟೆಗೆ ಯಾರಾದರೂ ಕಲ್ಲು ತೂರುತ್ತಾರಾ,” ಎಂದು ಪ್ರಶ್ನಿಸಿದರು.

   ಸುಮಲತಾ ಪರ ನಿಂತ ಇವರನ್ನು ಜೋಡೆತ್ತುಗಳು ಎಂದು ಬಣ್ಣಿಸಲಾಗಿತ್ತು. ಇದಕ್ಕೆ ವ್ಯಂಗ್ಯವಾಡಿರುವ ಕುಮಾರಸ್ವಾಮಿ, “ಇವು ಜೋಡೆತ್ತುಗಳಲ್ಲ. ರೈತರು ಬೆಳೆದ ಬೆಳೆಯನ್ನು ರಾತ್ರಿ ಹೋಗಿ ತಿನ್ನುವ ಕಳ್ಳೆತ್ತುಗಳು. ಜಿಲ್ಲೆಯಲ್ಲಿ ದುರಂತಗಳು ನಡೆಯುವಾಗ ಎಲ್ಲಿದ್ದರು,” ಎಂದು ಸಿಎಂ ಪ್ರಶ್ನಿಸಿದರು. ಕುಮಾರಸ್ವಾಮಿ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap