ಕಂದಕಕ್ಕೆ ಉರುಳಿದ ಬಸ್ : 22 ಮಂದಿ ದಾರುಣ ಸಾವು!!!

ಟ್ಯುನೇಷಿಯಾ :

       ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ದುರ್ಘಟನೆ ಟ್ಯುನೇಷಿಯಾದ ರಾಜಧಾನಿ ಸಮೀಪ ನಡೆದಿದೆ.

      ರಾಜಧಾನಿ ಟುನಿಸ್ ನಿಂದ ಎನೌಸಿ ಪ್ರಾಂತ್ಯಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಪ್ರವಾಸಿ ಬಸ್​ ಕಂದಕಕ್ಕೆ ಉರುಳಿದ ಪರಿಣಾಮ ಬಸ್​ನಲ್ಲಿದ್ದ 43 ಪ್ರಯಾಣಿಕರ ಪೈಕಿ 22 ಮಂದಿ ಸಾವೀಗೀಡಾಗಿ, 21 ಮಂದಿ ಗಾಯಗೊಂಡಿದ್ದಾರೆ.

       ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap