ಕೊರಟಗೆರೆ : ಅಪಘಾತದಲ್ಲಿ ವಿಕಲಚೇತನ ಸಾವು!!

ಕೊರಟಗೆರೆ:

       ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ, ಅಂಗವಿಕಲನೊಬ್ಬ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕೋಳಾಲ ಹೋಬಳಿ ಮಾವತ್ತೂರು ಕ್ರಾಸ್ ನ ಬಳಿ ನಡೆದಿದೆ.

      ತಾಲ್ಲೂಕಿನ ಭಕ್ತಹಳ್ಳಿರ ಮೂತಿ೯ (18 ವಷ೯ )ಸಾವಿಗೀಡಾದ ದುದೈ೯ವಿ. ಈತ ಅಂಗವಿಕಲನಾಗಿದ್ದು, ಇನ್ನೊಬ್ಬರ ಬೈಕಿನಲ್ಲಿ  ವೇತನ ತರಲು ತೆರಳುವ ವೇಳೆ ಅಪಘಾತ ಸಂಭವಿಸಿದೆ.

      ಅಪಘಾತದಿಂದ ಮುಂಬದಿ ಸವಾರನಾದ ಕೃಷ್ಣಮೂರ್ತಿ ಎಂಬುವವರ ಎರಡೂ ಕಾಲುಗಳು ತುಂಡಾಗಿವೆ ಎಂದು ತಿಳಿದುಬಂದಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. 

      ಪಿಎಸ್ಐ ಸಂತೋಷ್ ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದು, ಈ ಸಂಬಂಧ ಕೋಳಾಲ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
 

Recent Articles

spot_img

Related Stories

Share via
Copy link
Powered by Social Snap