ಬೆಂಗಳೂರು: ಸೆಪ್ಟೆಂಬರ್ 23 ರಂದು ಚಿತ್ರನಟ ದರ್ಶನ್ ಅವರ ಕಾರು ಮೈಸೂರಿನ ಹಿನಕಲ್ ಬಳಿ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಬಲಗೈಗೆ ಬಳೆಯು ಒತ್ತಿರುವುದರಿಂದ ಕೈನ ಮೂಳೆಯು ಮುರಿದು ಮೈಸೂರಿನ ಅಪೊಲೋ ಏಷಿಯಾ ಆಸ್ಪತ್ರ್ರೆಗೆ ದಾಖ ಲಾಗಿದ್ದರು.
ಯಾರೂ ಕೂಡ ಆಸ್ಪತ್ರೆ ಬಳಿ ಬರಬೇಡಿ. ನಾನು ಆರಾಮಾಗಿ ಇದ್ದೇನೆ ಎಂದು ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ ಮಾಡಿದ್ದರು. ಆದರೂ, ಅಭಿಮಾನಿಯೊಬ್ಬ ಆಸ್ಪತ್ರೆಗೆ ಬಂದು ದರ್ಶನ್ ಬೆಡ್ ಮೇಲೆ ಮಲಗಿದ್ದ ಫೋಟೋವನ್ನು ತೆಗೆದಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್ ಆಪ್ತರು ಮೊಬೈಲ್ ನ ಪುಡಿ ಪುಡಿ ಮಾಡಿದ್ದಾರೆ.
ಇದೀಗ ಆಸ್ಪತ್ರೆಯಲ್ಲಿರುವ ಫೊಟೋ ಒಂದು ಲೀಕ್ ಆಗಿದೆ.ನಟ ದರ್ಶನ್ ಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ. ಇದೀಗ ಎರಡನೇ ದಿನ ಕೂಡಾ ದರ್ಶನ್ ಗೆ ಚಿಕಿತ್ಸೆ ಮುಂದುವರೆದಿದೆ.
ದರ್ಶನ್ ಅವರ ಕ್ಷಣ ಕ್ಷಣದ ಮಾಹಿತಿ ಪಡಿಯಲು ಪ್ರಜಾಪ್ರಗತಿ facebook page ಲೈಕ್ ಮಾಡಿ