ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರು, ನಾಗೇಂದ್ರಗೆ ವಿನಾಯಿತಿ

ನಿನ್ನೆ ಇದ್ದು ವಿಚಾರಣೆಗೆ ರೆಡ್ಡಿ ಗೈರಾಗಿದ್ದರು , ಅಲಿಖಾನ್ ಮಾತ್ರ ವಿಚಾರಣೆಗೆ ಹಾಜರಾಗಿದ್ದರು. ಜನಾರ್ದನ ರೆಡ್ಡಿ ನಿನ್ನೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನೀಡಿದ ಖಡಕ್ ಸೂಚನೆ ಮೇರೆಗೆ ಇಂದು ರೆಡ್ಡಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಶಾಸಕ ಬಿ.ನಾಗೇಂದ್ರಗೆ ವಿನಾಯಿತಿ:
         ಶಾಸಕ ಬಿ. ನಾಗೇಂದ್ರ, ಶಾಸಕಾಂಗ ಸಭೆ ಹಿನ್ನೆಲೆಯಲ್ಲಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ಅವರ ಮನವಿಯನ್ನು ಪುರಸ್ಕರಿಸಿದೆ. 
       ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಸಿಟಿ ಸಿವಿಲ್​ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ವಿಚಾರಣೆ ಇದ್ದು, ಇಂದು ಅವರು ಹಾಜರಾಗಬೇಕಿತ್ತು. ಸದ್ಯ ಕೊರ್ಟ್​ ವಿಚಾರಣೆಯನ್ನು  ಫೆ. 18 ಕ್ಕೆ ಮುಂದೂಡಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap