ಬೆಂಗಳೂರು:
ಕಬಡ್ಡಿ ಆಟಗಾರ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ತರಬೇತುದಾರನೊಬ್ಬ ಡೆತ್ನೋಟ್ ಬರೆದಿಟ್ಟು ದಾವಣಗೆರೆಯ ಹರಿಹರ ನಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಬಡ್ಡಿ ಕೋಚ್ ಆಗಿದ್ದ ರುದ್ರಪ್ಪ ವಿ.ಹೊಸಮನಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಕಬಡ್ಡಿ ಕೋಚ್ ಆಗಿದ್ದರು. ಆಟಗಾರ್ತಿ ಡ್ರೆಸ್ ಚೇಂಜ್ ಮಾಡುವಾಗ ಇಣುಕಿ ನೋಡಿದ್ದ ಆರೋಪ ಎದುರಿಸಿದ್ದ ರುದ್ರಪ್ಪನನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮನೆಯಲ್ಲಿ ದೆಹಲಿಗೆ ಹೋಗುವುದಾಗಿ ಹೇಳಿ ಹರಿಹರಕ್ಕೆ ಬಂದಿದ್ದ ರುದ್ರಪ್ಪ. ಮೂರು ದಿನಗಳ ಹಿಂದೆ ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡಿದ್ದರು. ಡೆತ್ ನೋಟ್ನಲ್ಲಿ ಪತ್ನಿ, ಮಗನಿಗೆ ಕ್ಷಮೆ ಕೇಳಿದ್ದು, ನಾನು ನಿಮಗೆ ತೊಂದರೆ ಕೊಟ್ಟೆ, ಕೊನೇ ಕ್ಷಣದಲ್ಲಿ ನಿಮ್ಮನ್ನ ನೋಡೋಣ ಅಂದರೂ ಪರ್ಸ್ನಲ್ಲಿ ಫೋಟೋ ಇರಲಿಲ್ಲ ಅಂತ ಉಲ್ಲೇಖಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/236.jpg)