ತುಮಕೂರು : ಟಿಕ್-ಟಾಕ್ ಮಾಡಲು ಹೋದ ಯುವಕನ ಜೀವನ ನರಕ!!

ಚಿಕ್ಕನಾಯಕನಹಳ್ಳಿ :

 

      ಟಿಕ್ ಟಾಕ್‌ ಮಾಡಲು ಹೋಗಿ ಯುವಕನೊಬ್ಬ ತನ್ನ ಬೆನ್ನಿನ ಮೂಳೆಯನ್ನೇ ಮುರಿದುಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕರೆಯಲ್ಲಿ ನಡೆದಿದೆ.

      ಕುಮಾರ್ ಟಿಕ್‍ಟಾಕ್ ಮಾಡುವಾಗ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವಕ. 

      ಕುಮಾರ್‌ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಸ್ಲೋ ಮೋಷನ್​​ನಲ್ಲಿ ದೂರದಿಂದ ಓಡಿ ಬಂದು ಉಲ್ಟಾ ನೆಗೆಯಲು ಯತ್ನಿಸಿದ ಕುಮಾರ್,  ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಕುತ್ತಿಗೆ ಕೆಳಮುಖವಾಗಿ ಬಿದ್ದ ಫೋರ್ಸ್ ಗೆ ಸ್ಪೈನಲ್ ಕಾರ್ಡ್ ಮುರಿದುಕೊಂಡಿದ್ದಾನೆ.ಮೆದುಳಿನ ನಡುವಿನ ಭಾಗದಲ್ಲಿ ಕುಮಾರ್​ಗೆ ಪೆಟ್ಟಾಗಿದ್ದರಿಂದ ಅವರು ಈಗ ನಡೆಯಲೂ ಆಗದ ಸ್ಥಿತಿ ತಲುಪಿದ್ದಾರೆ.

      ಸದ್ಯ ಕುಮಾರ್‌ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇನ್ನು ಕುಮಾರ್​ ಚಿಕಿತ್ಸೆಗೆ ಕನಿಷ್ಟ 10 ಲಕ್ಷ ರೂಪಾಯಿ ವೆಚ್ಚವಾಗುತ್ತೆ ಎಂದು ಆಸ್ಪತ್ರೆ ತಿಳಿಸಿದೆ. 

      ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡು ಹಾಡುತ್ತಾ, ಕುಣಿಯುತ್ತಾ ಕುಟುಂಬ ಪೋಷಿಸುತ್ತಿದ್ದ ಕುಮಾರ್ ಈಗ ಜೀವನ ಪರ್ಯಂತ ಹಾಸಿಗೆ ಮೇಲೆ ಮಲಗುವ ಸ್ಥಿತಿ ಒದಗಿ ಬಂದಿದೆ. ಬಡ ಮಧ್ಯಮ ಕುಟುಂಬದವಾಗಿರುವ ಅವರ ಪೋಷಕರಿಗೆ ಕುಮಾರ್‌ನ ಚಿಕಿತ್ಸೆಯದ್ದೇ ಚಿಂತೆಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ