ಮಲ್ಯನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಯತ್ನ!!

ದೆಹಲಿ:

      ಸಾವಿರಾರು ಕೋಟಿ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್‌ ಮಲ್ಯನನ್ನು ಭಾರತಕ್ಕೆ ವಾಪಸ್‌ ಕರೆತರಲು  ಕೇಂದ್ರ ಸರಕಾರ ಹಲವು ಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

      ವಿಜಯ್ ಮಲ್ಯ ರವರೊಬ್ಬರೇ ಅಲ್ಲ ವಿದೇಶದಲ್ಲಿ ವಾಸ ಮಾಡುತ್ತಿರುವ ನೀರವ್‌ ಮೋದಿ, ಮೆಹುಲ್ ಚೋಕ್ಸಿ, ನಿತಿನ್‌ ಹಾಗೂ ಚೇತನ್ ಸಂದೇಸಾರಾ, ಲಲಿತ್ ಮೋದಿ ಹಾಗೂ ಯುರೋಪಿಯನ್‌ ಮಧ್ಯವರ್ತಿ ಗಿಡೋ ರಾಲ್ಫ್‌ ಹಶ್ಚೆ ಹಾಗೂ ಕಾರ್ಲೋ ಗೆರೋಸಾ ಸೇರಿ 58 ಆರ್ಥಿಕ ಅಪರಾಧಿಗಳನ್ನು ಕರೆತರಲು ಲುಕ್‌ ಔಟ್‌ ಸರ್ಕ್ಯುಲರ್‌ಗಳು, ಇಂಟರ್‌ಪೋಲ್‌ ರೆಡ್ ನೋಟಿಸ್ ಹಾಗೂ ಗಡೀಪಾರಿಗೆ ಮನವಿ ಮಾಡಿದ್ದೇವೆ ಎಂದು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

      ಈ ಪೈಕಿ ಸರಕಾರ ಹಾಗೂ ಸಿಬಿಐ, ಇಡಿ, ಡಿಆರ್‌ಐನಂತಹ ತನಿಖಾ ದಳಗಳು ಸದ್ಯ 16 ಮಂದಿಯನ್ನು ವಿವಿಧ ದೇಶಗಳಿಂದ ಗಡೀಪಾರು ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಲೋಕಸಭೆಯಲ್ಲಿ ವಿದೇಶಾಂಗ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap