ಹಿರಿಯ ರಂಗಕರ್ಮಿ ಡಿ.ಕೆ.ಚೌಟ ಇನ್ನಿಲ್ಲ!!!

ಬೆಂಗಳೂರು:

      ಹಿರಿಯ ರಂಗಕರ್ಮಿ, ಪ್ರಗತಿಪರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ(82) ಅವರು ಬುಧವಾರ ನಿಧನರಾದರು. 

      ಹಲವು ದಿನಗಳಿಂದ ಅಂಗಾಂಗ ವೈಫಲ್ಯದಿಂದ್ ಬಳಲುತ್ತಿದ್ದ ಉದ್ಯಮಿ ಹಾಗೂ ಹಿರಿಯ ರಂಗ ಸಂಘಟಕ ಡಿ.ಕೆ.ಚೌಟ ಅವರನ್ನು ಅಸೌಖ್ಯದ ಕಾರಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಂದು ಚಿಕ್ತಿತ್ಸೆಗೆ ಪ್ರತಿಸ್ಪಂದಿಸದೇ ಸಾವನ್ನಪ್ಪಿದ್ದಾರೆ. 

      ಕೇರಳದ ಮಂಜೇಶ್ವರದ ಬಳಿಯ ಮೀಯಪ್ಪಾಡುವಿನಲ್ಲಿ 1 ಜೂನ್ 1938ರಲ್ಲಿ ಜನಿಸಿದ್ದ ಡಿಕೆ ಚೌಟ ರಂಗಭೂಮಿಯಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದರು.

      ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್‌ ಅಧ್ಯಕ್ಷರಾಗಿಯೂ ಡಿ.ಕೆ. ಚೌಟ ಕಾರ್ಯ ನಿರ್ವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link