ಬೆಂಗಳೂರು:
ಅಂಬರೀಶ್ ಅವರ ಅಂತಿಮ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದ ನಟ ದರ್ಶನ್ ಇಂದು ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಿದ್ದಾರೆ.
ಅಂಬರೀಶ್ ನಿಧನ ಸುದ್ದಿ ಕೇಳಿದ ಕೂಡಲೇ ಸ್ಪೀಡನ್ ನಲ್ಲಿ ನಡೆಯುತ್ತಿದ್ದ ‘ಯಜಮಾನ’ ಚಿತ್ರೀಕರಣವನ್ನ ನಿಲ್ಲಿಸಿ, ತಕ್ಷಣ ಬೆಂಗಳೂರಿಗೆ ಬರುತ್ತಿರುವುದಾಗಿ ಸ್ವತಃ ನಟ ದರ್ಶನ್ ಟ್ವೀಟ್ ಮಾಡಿದ್ದರು.
7000ಕ್ಕೂ ಅಧಿಕ ಕಿ.ಮೀ ಪ್ರಯಾಣ ಭಾರತ ಮತ್ತು ಸ್ವೀಡನ್ ದೇಶಕ್ಕೆ ನೇರವಾಗಿ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್ ನಿಂದ ಭಾರತಕ್ಕೆ ಅಂದಾಜು 7000 ಕಿಲೋ ಮೀಟರ್ ಗಳಷ್ಟು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿದೆ. ಸ್ವೀಡನ್ ನಿಂದ ದುಬೈ, ದುಬೈನಿಂದ ಬೆಂಗಳೂರು ಮಾರ್ಗವಾಗಿ ದರ್ಶನ್ ಬಂದಿದ್ದಾರೆ.. ! ನಾಲ್ಕೈದು ದೇಶಗಳನ್ನ ದಾಟಿ ಬರಬೇಕು ಸ್ವೀಡನ್ ನಿಂದ ಭಾರತಕ್ಕೆ ಬರುವ ಮಾರ್ಗದಲ್ಲಿ ಹಲವು ದೇಶಗಳನ್ನ ದಾಟಿ ಬರಬೇಕು. ಪ್ರಮುಖ ದೇಶಗಳನ್ನ ಗಮನಿಸುವುದಾದರೇ, ಭಾರತದಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಇನ್ನು ಹಲವು ದೇಶಗಳನ್ನ ದಾಟಿ ಸ್ವೀಡನ್ ಗೆ ಹೋಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/ambianddarshan-2-1543208075.jpg)