ಗರ್ಭಿಣಿಗೆ ಎಚ್‌ಐವಿ ಸೋಂಕಿನ ರಕ್ತ ಪೂರೈಸಿದ್ದ ಯುವಕ ಆತ್ಮಹತ್ಯೆ!!!

ಮಧುರೈ: 

      ಅತ್ಯಂತ ಭಯಂಕರ ಮತ್ತು ಮಾರಣಾಂತಿಕ ಕಾಯಿಲೆಯಾದ ಹೆಚ್ಐವಿ ಸೋಂಕು ತಗುಲಿದ ರಕ್ತವನ್ನು ತುಂಬು ಗರ್ಭಿಣಿಗೆ ನೀಡಿದ ಪರಿಣಾಮ ಆಕೆ ಮತ್ತು ಮಗುವಿಗೂ ಹೆಚ್ಐವಿ ಸೊಂಕು ತಗುಲಿರುವ ಘಟನೆ ಚೆನ್ನೈ ನಗರದಲ್ಲಿ ನಡೆದಿದ್ದು, ರಕ್ತ ಪೂರೈಸಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

        ರಾಮನಾಥಪುರಂ ಜಿಲ್ಲೆಯ ತನ್ನ ನಿವಾಸದಲ್ಲಿ ತಾನು ನೀಡಿದ್ದ ರಕ್ತ ಎಚ್‌ಐವಿ ಸೋಂಕಿನಿಂದ ಕೂಡಿದೆ ಎಂದು ತಿಳಿದ ಕೂಡಲೇ ಯುವಕ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಆತನನ್ನು ಮಧುರೈ ರಾಜಾಜಿ ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗ್ಯಾಸ್ಟ್ರೊ ಕರುಳಿನ(ಜಿಐ) ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾನೆ.

      ಕಳೆದ ನವೆಂಬರ್‌ನಲ್ಲಿ ಆತ ರಕ್ತದಾನ ಮಾಡಿದಾಗ ತನಗೆ ಸೋಂಕು ಇರುವುದು ತಿಳಿದಿರಲಿಲ್ಲ. ಸರ್ಕಾರದ ಶಿವಕಾಶಿ ಬ್ಲಡ್‌ ಬ್ಯಾಂಕ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಐವಿ ಋಣಾತ್ಮಕ ಎಂದು ತಿಳಿದುಬಂದಿತ್ತು. ಬಳಿಕ 2016ರಲ್ಲಿ ಆತ ಖಾಸಗಿ ಬ್ಲಡ್‌ ಕ್ಯಾಪ್‌ನಲ್ಲಿ ರಕ್ತದಾನ ಮಾಡಲು ತೆರಳಿದಾಗ ಎಚ್‌ಐವಿ ಪಾಸಿಟೀವ್ ಎಂದು ತಿಳಿದುಬಂದಿತ್ತು.

ವೈದ್ಯರ ನಿರ್ಲಕ್ಷ್ಯದಿಂದ ಗರ್ಬಿಣಿಗೆ ಏಡ್ಸ್ ಸೋಂಕು …!

      ಖಾಸಗಿ ಪ್ರಯೋಗಾಲಯವು ಸಾಗರೋತ್ತರ ಉದ್ಯೋಗಕ್ಕಾಗಿ ನಡೆದ ವೈದ್ಯಕೀಯ ಪರೀಕ್ಷೆ ಸಮಯದಲ್ಲಿ ಎಚ್ಐವಿ ಸೋಂಕಿದೆ ಎಂದು ತಿಳಿದುಕೊಂಡ ಬಳಿಕ ಆತ ತನ್ನ ಸೋಂಕಿನ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದನು. ಆ ವೇಳೆಗಾಗಲೇ ಗರ್ಭಿಣಿಗೆ ರಕ್ತ ಪೂರೈಸಲಾಗಿತ್ತು. ಆಕೆಯನ್ನು ಪತ್ತೆ ಹಚ್ಚಿ ಪರೀಕ್ಷಿಸಿದಾಗ ಎಚ್‌ಐವಿ ಸೋಂಕಿತಳಾಗಿರುವುದು ತಿಳಿದುಬಂದಿದೆ.

     ಸದ್ಯ ಮಹಿಳೆಗೆ ಮಧುರೈನಲ್ಲಿ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ನೀಡುತ್ತಿದ್ದು, ಮಗುವಿನ ಎಚ್ಐವಿ ಸ್ಥಿತಿ ಜನನದ ಬಳಿಕವಷ್ಟೇ ತಿಳಿಯಲ್ಪಡುತ್ತದೆ.

      ಎರಡು ದಿನಗಳಿಂದಲೂ ಗಂಭೀರ ಸ್ಥಿತಿಯಲ್ಲಿದ್ದ ಯುವಕನಿಗೆ ಭಾನುವಾರ ಮುಂಜಾನೆ ರಕ್ತಸ್ರಾವವಾಗಲು ಆರಂಭಿಸಿತ್ತು. ಅಗತ್ಯ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link