ಇಸ್ಲಾಮಾಬಾದ್ :
ಗಡಿ ನಿಯಮ ಉಲ್ಲಂಘನೆ ಮಾಡಿ ಪಾಕಿಸ್ಥಾನದ ಮೇಲೆ ಆಕ್ರಮಣ ನಡೆಸಿರುವ ಭಾರತಕ್ಕೆ ಪಾಕಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವ ಶಾ ಮಹಮೂದ್ ಕುರೇಶಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತ ಎಲ್ಓಸಿ ಉಲ್ಲಂಘನೆ ಗೈದು ಪಾಕಿಸ್ಥಾನದ ಮೇಲೆ ಆಕ್ರಮಣ ನಡೆಸಿದೆ.
ಬಾಲಕೋಟ್, ಮುಜಫರಾಬಾದ್, ಚಕೋಟಿ ಎಂಬಲ್ಲಿ ಭಾರತೀಯ ವಾಯುಪಡೆಗಳು ದಾಳಿ ನಡೆಸಿದ್ದು ಅತಿಕ್ರಮಣ. ಇದಕ್ಕೆ ತಕ್ಕ ತಿರುಗೇಟು ನೀಡುವ ಹಕ್ಕು ನಮಗಿದೆ. ಮತ್ತು ಇದು ಆತ್ಮರಕ್ಷಣೆಗಾಗಿ ನಡೆಸುವ ಪ್ರತಿ ದಾಳಿಯಾಗಲಿದೆ’ ಎಂದು ಹೇಳಿದ್ದಾರೆ.
ಮೊದಲು ಅತಿಕ್ರಮಣ ಮಾಡಿದ್ದು ಭಾರತ. ಈಗ ಗಡಿ ನಿಯಮವನ್ನು ಉಲ್ಲಂಘನೆ ಮಾಡಿದೆ. ಇದು ಗಡಿ ನಿಯಂತ್ರಣ ರೇಖೆ ಹಾಗೂ ಕದನ ವಿರಾಮ ಉಲ್ಲಂಘನೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/5b7ab97761a5c.jpg)