ಕಣ್ಣೂರು:
ಹಣವಿಲ್ಲದೆ ಸಾಲ ಪಡೆಯಲು ಬ್ಯಾಂಕಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಧಿಪತಿಯಾಗಿರುವ ಘಡನೆ ಕಣ್ಣೂರಿನಲ್ಲಿ ನಡೆದಿದೆ.
ಕೇರಳದ ಕುರುಚಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ 55 ವರ್ಷದ ರಾಜನ್ ಲಾಟರಿಯಿಂದ ಕೋಟ್ಯಾಧಿಪತಿಯಾದ ವ್ಯಕ್ತಿ. ಇವರು 3 ವಾರಗಳ ಹಿಂದೆ ತಾನು ಪಡೆದಿದ್ದ ಸಾಲ ತೀರಿಸಲು ಗಡುವು ಮುಗಿದಿದ್ದರಿಂದ ಬ್ಯಾಂಕ್ನಲ್ಲಿ ಸಾಲ ಪಡೆಯಲು ಹೋಗಿದ್ದರು. ಬ್ಯಾಂಕ್ನಿಂದ ವಾಪಾಸ್ ಬರುವಾಗ ಮತ್ತೆ ಲಾಟರಿ ಟಿಕೆಟ್ ಆಸೆ ಚಿಗುರಿತ್ತು. ಈ ಬಾರಿಯಾದರೂ ಅದೃಷ್ಟ ಖುಲಾಯಿಸಬಹುದು ಎಂಬ ಭರವಸೆಯಿಂದ ಪಯ್ಯನ್ ಏಜೆನ್ಸಿಗೆ ತೆರಳಿ 300 ರೂ. ಕೊಟ್ಟು ಲಾಟರಿ ಖರೀದಿ ಮಾಡಿದ್ದರು.
ಗಂಡ ಲಾಟರಿಗೆ ದುಡ್ಡು ಹಾಕುವುದು ಹೆಂಡತಿ ರಜನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ, ರಾಜನ್ ಲಾಟರಿಯ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆದರೆ, ಅವರ ನಿರೀಕ್ಷೆ ಕೊನೆಗೂ ಸುಳ್ಳಾಗಲಿಲ್ಲ. ಸಾಲ ಪಡೆಯಲು ಬ್ಯಾಂಕ್ಗೆ ಹೋಗಿದ್ದ ರಾಜನ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.
ಬಂಪರ್ ಲಾಟರಿ ಗೆದ್ದ ನಂತರ, ರಾಜನ್ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ನಾನು ಸಂತೋಷವಾಗಿದ್ದೇನೆ, ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈಗ ನನ್ನ ಸಾಲಗಳೆಲ್ಲವೂ ತೀರಿಸಬೇಕಾಗಿದ್ದು, ಇದಲ್ಲದೇ ನಾನು ನನ್ನ ಮನೆಯನ್ನು ದುರಸ್ಥಿ ಮಾಡಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/Lottery-family.gif)