ಮಂಗಳೂರು :
ಹುಲಿವೇಷ ಕಲಿಯಲು ಬಂದ ಬಾಲಕಿಯ ಮೇಲೆ ಕುಖ್ಯಾತ ರೌಡಿಶೀಟರ್ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರಿನ ಕೆಲವು ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸಿದ್ದ ಆಕಾಶಭವನ ಶರಣ್ ಎಂಬ ಕುಖ್ಯಾತ ರೌಡಿ ಹುಲಿವೇಷ ತರಬೇತಿ ನೀಡುತ್ತಿದ್ದ. ಈ ತರಬೇತಿಗೆಂದು ಈತನ ಬಳಿ ಬಂದ ಬಾಲಕಿಯನ್ನು ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಮೂರು ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ.
ಈ ಘಟನೆಯ ಬಗ್ಗೆ ಬಾಲಕಿ ದೂರು ದಾಖಲಿಸಿದ್ದು, ರೌಡಿ ಶರಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/What-is-Puli-Kali-Folk-art-Pulikali-Tiger-dance-Kerala-Tiger-DancePulikali-Trichur-Kerala-Puli-KalipulikaliArts-and-Festivals-of-KeralaKerala-FestivalsKerala-culture-Kerala-Festivals-Kerala-Folkl-Art.jpg)