ದೆಹಲಿ:
ಪ್ರಧಾನಿ ಮೋದಿ ನನ್ನನ್ನು ಕೊಲ್ಲಲು ಬಯಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ನನ್ನ ಜೀವನವನ್ನು ಹಾಳು ಮಾಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಮಾದರಿಯಲ್ಲೇ ನನ್ನದೇ ಖಾಸಗಿ ಭದ್ರತಾ ಅಧಿಕಾರಿಗಳು ಬಿಜೆಪಿಯವರ ಕುಮ್ಮಕ್ಕಿನಿಂದ ನನ್ನನ್ನು ಕೊಲೆ ಮಾಡಬಹುದು ಎಂದು ಅವರು ಆರೋಪಿಸಿದ್ದರು. ಅಲ್ಲದೇ ನನ್ನ ಭದ್ರತಾ ಸಿಬ್ಬಂದಿ ಬಿಜೆಪಿ ಸರಕಾರಕ್ಕೆ ವರದಿ ನೀಡುತ್ತಾರೆ ಹಾಗೂ ಪ್ರಧಾನಿ ಮೋದಿಗೆ ಮತ ಹಾಕುತ್ತಾರೆ ಎಂದು ಸಹ ಕೇಜ್ರಿವಾಲ್ ಕಿಡಿಕಾರಿದ್ದರು.
विजय जी, मेरी हत्या मेरा PSO नहीं, मोदी जी करवाना चाहते हैं। https://t.co/2jCwJPOca8
— Arvind Kejriwal (@ArvindKejriwal) May 20, 2019
ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದ ವಿಜಯ್ ಗೋಯೆಲ್, ನಿಮಗೆ ನಿಮ್ಮ ಪಿಎಸ್ಒ ಮೇಲೆ ಅಪನಂಬಿಕೆ ಇರುವುದು ಕೇಳಿ ದುಃಖವಾಗುತ್ತಿದೆ. ಈ ಹೇಳಿಕೆ ನೀಡುವ ಮೂಲಕ ದೆಹಲಿ ಪೊಲೀಸರ ಗೌರವಕ್ಕೇ ನೀವು ಧಕ್ಕೆ ತಂದಿದ್ದೀರಿ. ನಿಮಗೆ ಅನುಮಾನವಿದ್ದರೆ ಸ್ವತಃ ಅವರೇ ತಮ್ಮ ಆಯ್ಕೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಿ. ಈ ವಿಚಾರದಲ್ಲಿ ನನ್ನ ಸಹಾಯವೇನಾದರೂ ಬೇಕಿದ್ದರೆ ಹೇಳಿ. ನೀವು ದೀರ್ಘ ಜೀವನ ನಡೆಸುವಂತಾಗಲಿ ಎಂದಿದ್ದರು.
ವಿಜಯ್ ಟ್ವೀಟ್ಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಕೊಲ್ಲಲು ಬಯಸುತ್ತಿರುವುದು ಮೋದಿಯವರೇ ಹೊರತು ಪಿಎಸ್ಒ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ