ಮತ್ತಷ್ಟು ಅತೃಪ್ತ ಶಾಸಕರ ರಾಜೀನಾಮೆ…?!

ಬೆಂಗಳೂರು:

   ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದೆ. ಇಂದು ಅಥವಾ ನಾಳೆ ಮತ್ತಷ್ಟು ಜನ ರಾಜೀನಾಮೆ ನೀಡಲು ವೇದಿಕೆ ಸಿದ್ಧವಾಗಿದೆ ಎಂದು ಹೇಳಲಾಗ್ತಿದೆ.

    ಕಾಂಗ್ರೆಸ್​ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ, ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಪುತ್ರಿ ರೂಪಾ ಶಶೀಧರ್, ಆನೇಕಲ್ ಶಾಸಕ ಶಿವಣ್ಣ, ಶ್ರೀನಿವಾಸ್​ ಗೌಡ, ಶಿರಾ ಸತ್ಯನಾರಾಯಣ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಚಿಕ್ಕೋಡಿ ಶಾಸಕ ಗಣೇಶ್​ ಹುಕ್ಕೇರಿ, ನಾಗೇಂದ್ರ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡುವವರ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇವರಲ್ಲಿ ಕೆಲವರು ಶನಿವಾರ ವಿಧಾನಸಭೆ ಸ್ಪೀಕರ್​ ರಮೇಶ್ ಕುಮಾರ್ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ. ಸ್ಪೀಕರ್ ಅವರು ಬೆಂಗಳೂರು ನಿವಾಸದಲ್ಲಿ ಸಿಗದಿದ್ದರೆ ಕೋಲಾರ ಜಿಲ್ಲೆಯ ಅವರ ನಿವಾಸದಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡುವ ಬಗ್ಗೆಯೂ ಅತೃಪ್ತರು ಚಿಂತನೆ ನಡೆಸಿದ್ದಾರೆ. ಇವರಲ್ಲದೇ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್, ಸುಬ್ಬಾರೆಡ್ಡಿ ಸೇರಿದಂತೆ ಹಲವು ಶಾಸಕರ ಹೆಸರುಗಳು ರಾಜೀನಾಮೆ ನೀಡುವ ಬಗ್ಗೆ ಕೇಳಿಬರುತ್ತಿವೆ.

ಕಾಂಗ್ರೆಸ್ ಪಕ್ಷದ ಹೆಚ್ಚಿನ ಅತೃಪ್ತರು ರಾಮಲಿಂಗಾರೆಡ್ಡಿಯವರ ನಾಯಕತ್ವದಲ್ಲಿಯೇ ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap