ನಿಖಿಲ್ ರನ್ನು ಸೋಲಿಸಲು ಸಾಧ್ಯವಿಲ್ಲ : ಎಚ್ ಡಿ ದೇವೇಗೌಡ

ಬೆಂಗಳೂರು: 
   ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಕೆಲವರು ರಣತಂತ್ರ ರೋಪಿಸುತ್ತಿದ್ದಾರೆ  , ಸಿದ್ದರಾಮಯ್ಯ ಬಂದ್ರೂ ಇಲ್ಲಿ ಬಂಡಾಯ ಶಮನವಾಗಿಲ್ಲ.. ನಿಖಿಲ್ ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
   
   ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸದಿರುವ ಕುರಿತು ಮಾತನಾಡಿದ ದೇವೇಗೌಡ ಅವರು, ‘ನಿಖಿಲ್​ ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲು ಮಂಡ್ಯದಲ್ಲಿ ಪಕ್ಷಾತೀತವಾಗಿ ಕೆಲವರು ತಂತ್ತ ರೋಪಿಸಿದ್ದಾರೆ ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ನಾಯಕರು ಈಗಾಗಲೇ ಬಹಳ ದೂರ ಹೋಗಿದ್ದಾರೆ. ಸಿದ್ದರಾಮಯ್ಯ ಅವರೇ ಖುದ್ದು ಬಂದರೂ ಫಲಕಾರಿಯಾಗುವುದಿಲ್ಲ ಎನ್ನುವ ಹಂತಕ್ಕೆ ಸ್ಥಿತಿ ತಲುಪಿದೆ ಎಂದರು.
   ಇದೇ ವೇಳೆ ದರ್ಶನ್ ಮತ್ತು ಯಶ್ ಅವರ ಪ್ರಚಾರದ ಕುರಿತು ಮಾತನಾಡಿದ ದೇವೇಗೌಡ ಅವರು, ‘ಸಿನಿಮಾ ನಟರಿಗೆ ಜನರನ್ನು ಆಕರ್ಷಣೆ ಮಾಡುವ ಶಕ್ತಿ ಇದೆ. ಹಾಗೆಂದು ಸಿನೆಮಾ ನಟರ ಅಬ್ಬರದಿಂದ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ನಾನು ಪ್ರಧಾನಿಯಾಗಿದ್ದಾಗ ತುಂಬಾ ನೋವುಂಡಿದ್ದೇನೆ. ನಾನು ಕಳೆದ 22 ವರ್ಷದಿಂದ ಕಾಂಗ್ರೆಸ್ ಬಗ್ಗೆಯಾಗಲೀ, ಸೋನಿಯಾ, ರಾಹುಲ್ ವಿರುದ್ದವಾಗಲೀ ಮಾತನಾಡಿಲ್ಲ ಎಂದು ಹೇಳಿದರು. ಅಂತೆಯೇ ಯಾವುದೇ ಕಾರಣಕ್ಕೂ ಎದುರಾಳಿಗಳ ನಿಂದನೆ ಮಾಡಬೇಡಿ.  ಅವತ್ತು ಕುಮಾರಣ್ಣ ಬಂದು ನಾನು ತಪ್ಪು ಮಾಡಿದೆ ಎಂದ. ಆಗ ನಾನು ತಪ್ಪು ಮಾಡಿದ್ರು ಪರವಾಗಿಲ್ಲ ಹೋಗಿ ಜನಕ್ಕೆ ಒಳ್ಳೆದು ಮಾಡು ಅಂದೆ. ಅಂದು ಪಕ್ಷದ ಉಳಿವಿಗಾಗಿ ಕುಮಾರಸ್ವಾಮಿ ಬೇರೆಯವರ ಜೊತೆ ಹೋಗಿ ಪಕ್ಷ ಉಳಿಸಿಕೊಂಡ ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
   ಹಾಗೇ    ಕೆ.ಆರ್. ಪೇಟೆಯಲ್ಲಿ ಮಾತನಾಡಿದ ದೇವೇಗೌಡ ಅವರು, ನನ್ನ ಗೆಲುವಿಗೆ ಪರಮೇಶ್ವರ್​ ಹಾಗೂ ನಿಖಿಲ್​ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಇರುವ ಭಿನ್ನಮತ ಶಮನಕ್ಕೆ ಇಬ್ಬರೂ ಮುಂದಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಹೋದರೂ ಮಂಡ್ಯದಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ರೀತಿಯ ಪರಿಸ್ಥಿತಿ ಮಂಡ್ಯದಲ್ಲಿ ಏರ್ಪಟ್ಟಿದೆ. ಅಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳೇ ಇಲ್ಲ. ನಮ್ಮ ವಿರುದ್ಧ ಪಣತೊಟ್ಟವರ ಮನೆ ಬಾಗಿಲಿಗೆ ನಾವು ಹೋಗಲ್ಲ. ನನ್ನ ಜೊತೆ ಬಂಧು ಬಾಂಧವರಾದ ನೀವಿದ್ದೀರಿ. ನಿಮ್ಮನ್ನು ಬಿಟ್ಟು ನಾನು ಯಾರ ಬಳಿ ಹೋಗ್ಲಿ? ಯಾರ ಬಳಿ ಹೋಗುವುದು ಎಂದು ನಾನು ನಿಮ್ಮ ಹತ್ತಿರವೇ ಕೇಳುತ್ತೇನೆ. ಇದಕ್ಕಾಗಿ ನಮ್ಮ ಪಕ್ಷದ ಯುವಕರು ಪಣ ತೊಡಬೇಕು. ಅತ್ಯಂತ ಹೆಚ್ಚಿನ ಬಹುಮತದಿಂದ ನಿಖಿಲ್ ರನ್ನು ಗೆಲ್ಲಿಸಬೇಕು ಎಂದು ಹೇಳಿದರು.
       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap