ಪ್ರೇಯಸಿ ಕೈಕೊಟ್ಟಿದ್ದಕ್ಕೆ ಮನನೊಂದು ಪ್ರೇಮಿ ಆತ್ಮಹತ್ಯೆ

ಚಿಕ್ಕಮಗಳೂರು :

    ಪ್ರೇಯಸಿ ಕೈಕೊಟ್ಟಳೆಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್ ನಲ್ಲಿ ನಡೆದಿದೆ.

   ಆತ್ಮಹತ್ಯೆ ಮಾಡಿಕೊಂಡ ಯುವಕ ಸತೀಶ್ (29) ಎಂದು ಗುರುತಿಸಲಾಗಿದೆ.ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದವ . ಈತ  ಪ್ರೀತಿಸುತ್ತಿದ್ದ ಯುವತಿ ಮದುವೆ ಆಗುತ್ತೇನೆಂದು  ಮೃತ ಸತೀಶ್​​ನಿಗೆ ಮಾತು ಕೊಟ್ಟಿದ್ದಳು.  ನಂತರ ಆಕೆ ನಿರಾಕರಿಸಿದ್ದಾಳೆಂದು ಮನನೊಂದು ಸತೀಶ್ ಮೊಬೈಲ್​​​ನಲ್ಲಿ ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ನಾನು ಅವಳಿಗೆ ಬಿಎಸ್ಸಿ ನರ್ಸಿಂಗ್​ ಮಾಡಿಸಿದೆ. ನನ್ನ ಸಾವಿಗೆ ಪವಿತ್ರಳೇ ಕಾರಣ ದಯವಿಟ್ಟು ಅವಳಿಗೆ ತಕ್ಕ ಶಿಕ್ಷೆಆಗಬೇಕು. ನಮ್ಮ ಮನೆಯವರಿಗೆ  ಏನು ಹೇಳಿಲ್ಲ ದಯವಿಟ್ಟು ಹೇಳಿ ಎಂದು ಹಿರೇಬೈಲ್​​​​ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಪ್​​​​ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap