ಮೈಸೂರು: ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು

ಮೈಸೂರು :

      ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಲಕಾಡಿನಲ್ಲಿ ನಡೆದಿದೆ.  ನೀರಿನಲ್ಲಿ ಮುಳಗಿ ಅಯ್ಯಪ್ಪ ಮಾಲಾಧಾರಿ ಮುಳುಗಿ ಸಾವನ್ನಪ್ಪಿದ್ದಾರೆ.


   ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗಧಾಮದಲ್ಲಿ ಘಟನೆ ನಡೆದಿದ್ದು ನಟೇಶ್ (39) ಸಾವನ್ನಪಿದ ಮೃತ ದುರ್ದೈವಿ. ನಟೇಶ್ ಹಾಸನದ ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ.  48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು.

ಸಾರ್ವಜನಿಕರಿಗೆ ಶಬರಿಮಲೆಗೆ ಅನುಮತಿ ನಿರಾಕರಣೆ ಕಾರಣ ..  ಹಿನ್ನಲೆ ಅಯ್ಯಪ್ಪ ಸ್ವಾಮಿ ಭಕ್ತರು ತಲಕಾಡಿಗೆ ಪ್ರವಾಸ ಬಂದಿದ್ದರು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap