ತಿಪಟೂರು ಬ್ರೇಕಿಂಗ್ :
ತಾಲ್ಲೂಕಿನ ಕೆಬಿ ಕ್ರಾಸ್ ಕುಂದೂರು ಪಾಳ್ಯದ ಬಳಿ ಇಟಿಯೋಸ್ ಕಾರು ನೇರಳೆ ಮರಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಇಬ್ಬರ ದುರ್ಮರಣ ಮೂರು ಜನ ಸ್ಥಿತಿ ತೀವ್ರ ಗಂಭೀರ. ತುರುವೇಕೆರೆ ತಾಲ್ಲೂಕು ಚಾಕೊಹಳ್ಳಿ ಪಾಳ್ಯದ ವಿದ್ಯಾರ್ಥಿಗಳಾದ ಕಿರಣ್ (18).ಹಾಗೂ ತ್ರಿನೇಶ್ (20) ಚಿಕ್ಕಮಗಳೂರಿ ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳುವಾಗ ಬೆಳ್ಳಂಬೆಳಗ್ಗೆ ಈ ಘಟನೆ ಜರುಗಿದೆ. ಕಾರಿನಲ್ಲಿ ಇತರೆ ಮೂರು ಜನ ವಿದ್ಯಾರ್ಥಿಗಳು ಕೂಡ ಇದ್ದರು ಎಂದು ತಿಳಿದು ಬಂದಿದೆ.
ಮೃತ ವಿದ್ಯಾರ್ಥಿಗಳು ತುರುವೇಕೆರೆ ತಾಲೂಕು ದಂಡಿನಶಿವರ ಕ್ಕೆ ಸೇರಿದ ಗ್ರಾಮದವರಾಗಿದ್ದು . ಗಾಯಾಳು ವಿದ್ಯಾರ್ಥಿಗಳನ್ನು ತುರುವೇಕೆರೆ ಹಾಗೂ ದಂಡಿನ ಶಿವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಕೆಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/7d2ead42-cd88-4f4a-aa96-62b5cea16a19.jpg)