ದೇವರು ಬೇಕಾಗಿದ್ದಾರೆ ಇಂದು ತೆರೆಗೆ

ಬೆಂಗಳೂರು :

    ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಟೈಟಲನ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಸಾಲಿಗೆ ಹೊಸ ಸೇರ್ಪಡೆ ದೇವರು ಬೇಕಾಗಿದ್ದಾರೆ. ಕೆಂಜ ಚೇತನ್‌ಕುಮಾರ್‌ ಎಂಬುವವರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

  

 ಚೇತನ್‌ ಈ ಹಿಂದೆ ಹೊಸಬರನ್ನು ಇಟ್ಟುಕೊಂಡು ಪ್ರೇಮ ಗೀಮಾ ಜಾನೇ ದೋ ಎಂಬ ಪ್ರೇಮಕಥೆಯುಳ್ಳ ಸಿನಿಮಾ ಮಾಡಿದ್ದರು. ಆ ಸಿನಿಮಾ ಮೂಲಕ ಗಮನ ಸೆಳೆದಿದ್ದ, ಅವರು ಈಗ ದೇವರು ಬೇಕಾಗಿದ್ದಾರೆ ಎಂಬ ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಶಿವರಾಮ್‌ ಮತ್ತು ಅನೂಪ್‌ ಎಂಬ ಪುಟ್ಟ ಬಾಲಕ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

     

 

 

 

ಇವರ ಜತೆ ತುಮಕೂರಿನ ನಟ ಪ್ರಸಾದ್‌ ವಸಿಷ್ಠ, ಸತ್ಯ ಎಂಬುವವರು ನಟಿಸುತ್ತಿದ್ದಾರೆ.   ಈ ಚಿತ್ರಕ್ಕೆ ಜುವಿನ್‌ ಸಿಂಗ್‌  ಸಂಗೀತ ನಿರ್ದೇಶನ ಮಾಡಿದ್ದಾರೆ   , ರುದ್ರುಮುನಿ ಸಿನಿಮಾಟೋಗ್ರಫರ್‌ ಆಗಿ ಕೆಲಸ ಮಾಡಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ