ಕಮಾಂಡರ್​ ಸಾವಿಗೆ ಸಂತಾಪ ಸೂಚಿಸಿದ ಸಿಎಂ

Aero India 2019: ವಿಂಗ್​ ಕಮಾಂಡರ್​ ಸಾವಿಗೆ ಸಂತಾಪ; 'ಬೆಂಗಳೂರಿನ ಹೆಮ್ಮೆ' ಸಮಾರಂಭವಿದು ಎಂದ ನಿರ್ಮಲಾ ಸೀತಾರಾಮನ್

       ಈ ವೇಳೆ ನಿನ್ನೆಯ ಸೂರ್ಯ ಕಿರಣ ಲಘು ವಿಮಾನ ಡಿಕ್ಕಿ ಸಂಭವಿಸಿದ್ದರಿಂದ ಸಾವನ್ನಪ್ಪಿದ್ದ ವಿಂಗ್​ ಕಮಾಂಡರ್​ ಸಾಹಿಲ್​ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

       ಸಾಹಿಲ್ ಗಾಂಧಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮಾತು ಆರಂಭಿಸಿದ್ದ ಸಿಎಂ ಕುಮಾರಸ್ವಾಮಿ, ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಮುಖ್ಯವಾಗಿದೆ. ಕಳೆದ ವರ್ಷ ರಾಜ್ಯದ 12 ಟ್ರಿಲಿಯನ್ ಜಿಆರ್​ಡಿಪಿ ಇತ್ತು. ನಮ್ಮ ರಾಜ್ಯದಲ್ಲಿ ಆವಿಷ್ಕಾರಗಳು, ನೂತನ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ. ಅದಕ್ಕೆ ಬೇಕಾದ ಅವಶ್ಯಕ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ. ಹೆಚ್ಚಿನ ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವೈಮಾನಿಕ ಉದ್ಯಮಕ್ಕೆ ಅವಶ್ಯವಿರುವ ತಯಾರಿಕಾ ಘಟಕಗಳಿವೆ. ಕರ್ನಾಟಕ ಸರ್ಕಾರ ಮುಂದಿನ 5 ದಿನಗಳಲ್ಲಿ 50ಕ್ಕೂ ಹೆಚ್ಚು ಬಿಟುಬಿ ಮೀಟಿಂಗ್ ಗಳನ್ನು ನಡೆಸಲಿದೆ ಎಂದರು.

      ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಮಾತನಾಡಿ, ಇದು ಬೆಂಗಳೂರಿಗೆ  ಹೆಮ್ಮೆಯ ಸಮಾರಂಭ. ಏರೋ ಶೋದಲ್ಲಿ 600 ಭಾರತೀಯ ಕಂಪೆನಿಗಳು,400 ವಿದೇಶಿ ಕಂಪೆನಿಗಳು ಶೋದಲ್ಲಿ ಭಾಗಿಯಾಗುತ್ತಿದೆ. ಈ ಶೋ ಮೂಲಕ ವಿಶ್ವದ ದಿಗ್ಗಜರ ಸಾಲಲ್ಲಿ ಭಾರತ ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

      ಏರೋ ಇಂಡಿಯಾ ಮಾರುಕಟ್ಟೆ ಬೆಳವಣಿಗೆಗೆ ವೇದಿಕೆಯಾಗಿದೆ. ಈ ಮೂಲಕ 58000 ಕೋ. ರೂ.ಗೆ ಈ ಉದ್ಯಮ‌ ಬೆಳೆದಿದೆ. 4 ಸಾವಿರಕ್ಕೂ ಹೆಚ್ಚು ಏರ್​ಕ್ರಾಫ್ಟ್ ತಯಾರಿಸಿದ್ದೇವೆ. ನೇಪಾಳ, ಇಸ್ರೇಲ್​, ರಷ್ಯಾಗೆ ನಮ್ಮ ವಿಮಾನ ರಫ್ತು ಮಾಡಲಾಗಿದೆ ಎಂದರು

       ಬೆಂಗಳೂರು ಐಟಿ ವಲಯದ ಒಟ್ಟಾರೆ ಆದಾಯ ಮತ್ತು ಜಿಡಿಪಿಗೆ ಬಹುದೊಡ್ಡ ಕೊಡುಗೆ ಕೊಟ್ಟಿದೆ. ವೈಮಾನಿಕ ಕ್ಷೇತ್ರ ಅಭಿವೃದ್ಧಿಗೂ ಸಿಲಿಕಾನ್​ ಸಿಟಿ ಮುಂಚೂಣಿಯಲ್ಲಿದೆ. ಮೂರ್ನಾಲ್ಕು ವರ್ಷಗಳಲ್ಲಿ 127,500 ಕೋಟಿ ಹಣವನ್ನು ರಕ್ಷಣಾ ಇಲಾಖೆ ಯುದ್ಧೋಪಕರಣಗಳ ಕೊಳ್ಳುವಿಕೆಗೆ ಖರ್ಚುಮಾಡಲಾಗಿದೆ. ಬೇರೆ ದೇಶಗಳಿಗಿಂತ ಹೆಚ್ಚಾಗಿ ನಮ್ಮ ದೇಶದ ತಯಾರಕರಿಗೆ ಇದರ ಆರ್ಡರ್ ಕೊಡಲಾಗುತ್ತಿದೆ. ಇದು ನಮ್ಮ ದೇಶದ ವಹಿವಾಟಿಗೆ ಬಹುದೊಡ್ಡ ಬೆಂಬಲ ನೀಡಲಿದೆ ಎಂದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link