ಪ್ರಧಾನಿಯಿಂದ ದ.ಕೊರಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣ!!February 21, 2019By Prajapragathi52Lead Newsವಿದೇಶಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅಲ್ಲಿ ಭಾರತದ ರಾಷ್ಟ್ರಪಿತ ಹಾಗೂ ಶಾಂತಿಧೂತ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದ್ದಾರೆ. ಇಂದು ಯೋನ್ಸೆ ವಿವಿಗೆ ಭೇಟಿ ನೀಡಿ, ಮಾತನಾಡಿದ ಪ್ರಧಾನಿ, ಶಾಂತಿಧೂತ ಮಹಾತ್ಮಗಾಂಧಿ ಅವರ ಆದರ್ಶಗಳು ಇಂದಿನ ಉಗ್ರವಾದದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿ. ಅಷ್ಟೇ ಅಲ್ಲ ಪರಿಸರ ನಾಶ ಹಾಗೂ ಉಗ್ರಗಾಮಿ ಚಟುವಟಿಕೆಗಳು ಇಂದು ವಿಶ್ವ ಎದುರಿಸುತ್ತಿರುವ ಮಹಾ ಸವಾಲುಗಳಾಗಿವೆ. ಇವುಗಳನ್ನ ಎದುರಿಸಲು ಮಹಾತ್ಮಗಾಂಧಿ ಅವರ ಚಿಂತನೆಗಳು ಬಹಳಷ್ಟು ಸಹಕಾರಿ ಎಂದು ಮೋದಿ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವಸಂಸ್ಥೆ ಮಾಜಿ ಪ್ರಧಾನಕಾರ್ಯದರ್ಶಿ ಬಾನ್-ಕಿ-ಮೂನ್ ಹಾಜರಿದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ Share via: Facebook WhatsApp Telegram Twitter More Recent Articlesಕೋಲಾರ್ ಇನ್ ಲಾಡ್ಜ್ ಮೇಲೆ ಪೊಲೀಸರ ದಿಢೀರ್ ದಾಳಿ: ವೇಶ್ಯಾವಾಟಿಕೆ ದಂದೆಯಲ್ಲಿದ್ದ 9 ಮಂದಿ ವಶ Lead News May 21, 2026 ಕಾಲ್ ಸೆಂಟರ್ಗಳ ಮೇಲೆ ಸೈಬರ್ ಕಮಾಂಡ್ ಕೇಂದ್ರದ ಅಧಿಕಾರಿಗಳು ದಾಳಿ : ಇಬ್ಬರ ಬಂಧನ Lead News May 21, 2026 ಪುರಸಭೆ ಅಧಿಕಾರಿಗಳ ಕ್ರಮಕ್ಕೆ ಬೀದಿಬದಿ ವ್ಯಾಪಾರಿಗಳ ಆಕ್ರೋಶ Lead News May 21, 2026 ರಸ್ತೆ ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮ : ಬಿಜೆಪಿ ಮುಖಂಡರು ಹಾಗೂ ನಾಗರಿಕರಿಂದ ದಿಢೀರ್ ಮುಷ್ಕರ Lead News May 21, 2026 ಕುಮಾರಸ್ವಾಮಿ ಅನಾವಶ್ಯಕ ಮಾತನಾಡಬಾರದು: ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ Lead News May 21, 2026 Related Stories Lead Newsಕೋಲಾರ್ ಇನ್ ಲಾಡ್ಜ್ ಮೇಲೆ ಪೊಲೀಸರ ದಿಢೀರ್ ದಾಳಿ: ವೇಶ್ಯಾವಾಟಿಕೆ ದಂದೆಯಲ್ಲಿದ್ದ 9 ಮಂದಿ ವಶ Prajapragathi - May 21, 2026 Lead Newsಕಾಲ್ ಸೆಂಟರ್ಗಳ ಮೇಲೆ ಸೈಬರ್ ಕಮಾಂಡ್ ಕೇಂದ್ರದ ಅಧಿಕಾರಿಗಳು ದಾಳಿ : ಇಬ್ಬರ ಬಂಧನ Prajapragathi - May 21, 2026 Lead Newsಪುರಸಭೆ ಅಧಿಕಾರಿಗಳ ಕ್ರಮಕ್ಕೆ ಬೀದಿಬದಿ ವ್ಯಾಪಾರಿಗಳ ಆಕ್ರೋಶ Prajapragathi - May 21, 2026 Lead Newsರಸ್ತೆ ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮ : ಬಿಜೆಪಿ ಮುಖಂಡರು ಹಾಗೂ ನಾಗರಿಕರಿಂದ ದಿಢೀರ್ ಮುಷ್ಕರ Prajapragathi - May 21, 2026 Lead Newsಕುಮಾರಸ್ವಾಮಿ ಅನಾವಶ್ಯಕ ಮಾತನಾಡಬಾರದು: ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ Prajapragathi - May 21, 2026