ಪ್ರತೀಕಾರ ಪಡೆದೇ ತೀರುತ್ತೇವೆ ಎಂದು ​ಸಿ.ಆರ್.​ಪಿ.ಎಫ್ ಶಪಥ !!

ನವದೆಹಲಿ:

       ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಕುರಿತು ಸಿಆರ್​ಪಿಎಫ್​ ಇಂದು ಅಧಿಕೃತವಾಗಿ ಹೇಳಿಕೆ ನೀಡಿದೆ.

      ಇಂದು ಟ್ವೀಟ್​ ಮಾಡಿರುವ ಸಿಆರ್​ಪಿಎಫ್​, “ನಾವು ಈ ಘಟನೆಯನ್ನು ಮರೆಯುವುದಿಲ್ಲ. ಈ ಕೃತ್ಯ ಎಸಗಿದ ಯಾರನ್ನೂ ನಾವು ಕ್ಷಮಿಸುವುದಿಲ್ಲ. ದಾಳಿಯ ವೇಳೆ ಹುತಾತ್ಮರಾದ ಯೋಧರಿಗೆ ನಮ್ಮ ಸಲ್ಯೂಟ್​. ಹುತಾತ್ಮ ಯೋಧರ ಕುಟುಂಬದ ಅಣ್ಣ ತಮ್ಮಂದಿರೊಂದಿಗೆ ನಾವಿದ್ದೇವೆ,” ಎಂದು ತಿಳಿಸಿದೆ. 

     ಇದೇ ವೇಳೆ ಮುಯ್ಯಿಗೆ ಮುಯ್ಯಿ ನೀಡುವ ಮಾತನ್ನೂ ಸಿಆರ್​ಪಿಎಫ್​ ಆಡಿದೆ. “ಈ ಘೋರ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ,” ಎಂದು ಸಿಆರ್​ಪಿಎಫ್​ ಶಪಥ ಮಾಡಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap