ನವದೆಹಲಿ :
ಸಂಸತ್ತಿನಲ್ಲಿ ಸ್ಪಿಕರ್ ಜೊತೆ ಅಶಿಸ್ತಿನ ವರ್ತನೆಗಾಗಿ ವಿರೋಧ ಪಕ್ಷದ 8 ಸಂಸದರನ್ನು ಒಂದು ವಾರದ ಕಾಲ ಅಮಾನತು ಮಾಡಲಾಗಿದೆ.
ಕೃಷಿ ಮಸೂದೆಗಳ ಕುರಿತು ಚರ್ಚಿಸುವಾಗ ಭಾನುವಾರ ರಾಜ್ಯಸಭೆಯಲ್ಲಿ ಗಲಭೆ ಸೃಷ್ಟಿಸಿದ ಪ್ರತಿಪಕ್ಷ ಸದಸ್ಯರ ವಿರುದ್ಧ ಬಿಜೆಪಿ ರಾಜ್ಯಸಭಾ ಸಂಸದರು ದೂರು ದಾಖಲಿಸಿದ್ದಾರೆ. ಸಂಬಂಧಪಟ್ಟ ಸದಸ್ಯರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯಸಭಾ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದ್ದರು.
Eight members of the House are suspended for a week: Rajya Sabha Chairman M Venkaiah Naidu https://t.co/BSjWnK4lvf pic.twitter.com/TFY7KmfUbm
— ANI (@ANI) September 21, 2020
ಇಂದು ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮತ್ತೆ ವಿಪಕ್ಷ ನಾಯಕರು ಗಲಾಟೆಗೆ ಮುಂದಾದರು. ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಹಲವು ಬಾರಿ ಎಚ್ಚರಿಕೆ ನೀಡಿದರೂ ಸದಸ್ಯರು ಸುಮ್ಮನಾಗದ ಹಿನ್ನಲೆಯಲ್ಲಿ ಟಿಎಂಸಿ ಸದಸ್ಯ ಡರೇಕ್ ಒಬ್ರಿಯಾನ್ ಅವರನ್ನು ಸದನದಿಂದ ಹೊರ ಹೋಗುವಂತೆ ಸೂಚಿಸಿದರು.
ಆದರೂ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಿದರು.
ನಿನ್ನೆ ವಿರೋಧಪಕ್ಷಗಳ ಭಾರೀ ಗದ್ದಲ ಹಾಗೂ ಪ್ರತಿಭಟನೆ ನಡುವೆ ಧ್ವನಿಮತದ ಮೂಲಕ ಎರಡು ಕೃಷಿ ಮಸೂದೆಗಳು ಅಂಗೀಕಾರಗೊಂಡವು. ಇಂದು ಮೂರನೇ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಆದ್ರೆ 8 ಸದಸ್ಯರ ಅಮಾನತಿನ ವಿರುದ್ಧ ಮತ್ತೆ ಇಂದು ಪ್ರತಿಭಟನೆ ಶುರುವಾಗಿದೆ. ಅಮಾನತುಗೊಂಡ ಸದಸ್ಯರು ಸದನದಿಂದ ಹೊರನಡೆಯಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಕಲಾಪವನ್ನ ಕೆಲ ಕಾಲ ಮುಂದೂಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
