ವಿಜಯಪುರ:
ದೇಶಕ್ಕೆ ಈಗ ರಾಜಕೀಯ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಸ್ಯೆಗಳ ಮಧ್ಯೆಯೇ 2040ರೊಳಗೆ ಭಾರತವನ್ನು ಸದೃಢಗೊಳಿಸಬೇಕಿದೆ. ಜಾತಿ, ಧರ್ಮ, ರಾಜಕೀಯ ಅಸಹಿಷ್ಣುತೆಯಿಂದ ದೇಶದಲ್ಲಿ ಅಸ್ಥಿರತೆ ಎದುರಾಗಿದೆ. ಈ ಹಿನ್ನೆಲೆ ರಾಜಕೀಯ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ-ಬಾಬಾ ರಾಮ್ದೇವ್
ರಾಜಕೀಯ ಪಕ್ಷಗಳಿಗೆ ಅವರದೇ ಆದ ಹಿತಾಸಕ್ತಿಗಳಿವೆ. ಅವರಿಗೆ ದೇಶದ ಬಗ್ಗೆ ಚಿಂತೆಯಿಲ್ಲ. ಕೇವಲ ಭಾರತ ಮಾತಾ ಘೋಷಣೆಯಿಂದ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ಜಾತಿಮುಕ್ತ ಭಾರತ ಅಗತ್ಯವಾಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಜಾತಿಮುಕ್ತ ಭಾರತ ಮಾಡುವ ಉದ್ದೇಶವಿಲ್ಲ ಎಂದು ಯೋಗಗುರು ಬಾಬಾ ರಾಮದೇವ್ ಬೇಸರ ವ್ಯಕ್ತಪಡಿಸಿದರು
ವಿಜಯಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ರಾಜಕೀಯವಾಗಿ ಅನಿಶ್ಚಿತ ಭಾವನೆಯಿದೆ. ದೇಶಕ್ಕೆ ಈಗ ರಾಜಕೀಯ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಸ್ಯೆಗಳ ಮಧ್ಯೆಯೇ 2040ರೊಳಗೆ ಭಾರತವನ್ನು ಸದೃಢಗೊಳಿಸಬೇಕಿದೆ. ಜಾತಿ, ಧರ್ಮ, ರಾಜಕೀಯ ಅಸಹಿಷ್ಣುತೆಯಿಂದ ದೇಶದಲ್ಲಿ ಅಸ್ಥಿರತೆ ಎದುರಾಗಿದೆ. ಈ ಹಿನ್ನೆಲೆ ರಾಜಕೀಯ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು
ಗೋಹತ್ಯೆ ನಡೆಯಬಾರದು, ಅದರ ಹೆಸರಿನಲ್ಲಿ ಮನುಷ್ಯರ ಹತ್ಯೆಯೂ ಆಗಬಾರದು. ಇಂಥ ಒಂದೆರಡು ಘಟನೆಗಳನ್ನು ವೈಭವೀಕರಿಸಿ ಇಡೀ ದೇಶದ ಹೆಸರಿಗೆ ಕಳಂಕ ತರುತ್ತದೆ . ಇದು ದೇಶದ್ರೋಹಿ ಕೆಲಸ. ಕಪ್ಪು ಹಣ ವಿಚಾರ, ಮೋದಿ ಪ್ರಧಾನಿಯಾದ ಬಳಿ ಈ ವಿಷಯ ಪ್ರಸ್ತಾಪಿಸಿದ್ದೆವು. ಇದನ್ನು ಮೋದಿಗೆ ಬಿಟ್ಟಿದ್ದೇವೆ, ಕಪ್ಪು ಕಪ್ಪು ಮನಸ್ಸುಗಳನ್ನು ಸರಿಪಡಿಸುವ ಕೆಲಸ ಆಗಬೇಕು. ವಿದೇಶದಿಂದ ನಿರೀಕ್ಷಿತ ಮಟ್ಟದಲ್ಲಿ ಕಪ್ಪು ಹಣ ವಾಪಸ್ ಬಂದಿಲ್ಲ. ಶೇ.99 ರಷ್ಟು ಹಿಂದೂ-ಮುಸ್ಲಿಮರ ಪೂರ್ವಜರು ಒಬ್ಬರೇ ಆಗಿದ್ದಾರೆ, ದೇವರು, ದೇಶ ಒಬ್ಬರೇ. ಆದರೆ ರಾಜಕೀಯ ಮುಖಂಡರು ಮಂದಿರ-ಮಸೀದಿ ಹೆಸರಿನಲ್ಲಿ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಗವಾನ್ ಹೇಳಿಕೆಗೆ ಆಕ್ರೋಶ: ನಮ್ಮ ಪೂರ್ವಜರನ್ನು ಜಾತಿಗೆ ಹೋಲಿಸುವ ಕೆಲಸವನ್ನು ರಾಜಕೀಯ ಮುಖಂಡರು ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ, ನಾಚಿಕೆಗೇಡು ವಿಚಾರ. ಸಾಹಿತಿ ಭಗವಾನ್ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ರಾಮ ಮಂದಿರ ನಿರ್ಮಾಣ ವಿಚಾರದ ಬದಲಾಗಿ, ರಾಮ-ಸೀತೆಯಂತೆ, ಕೃಷ್ಣರಂತ ವ್ಯಕ್ತಿತ್ವ ಬೆಳೆಸುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
