ತಿರ್ಪೂರ್:
ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೊರಟಿದ್ದ ಕೇರಳ ರಾಜ್ಯ ಸಾರಿಗೆ ಬಸ್ವೊಂದು ತಿರ್ಪೂರ್ ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಟ್ರಕ್ಗೆ ಗುದ್ದಿದ ಪರಿಣಾಮ 20 ಮಂದಿ ಸಾವಿಗೀಡಾಗಿದ್ದಾರೆ ಬಸ್ ನಲ್ಲಿ ಸುಮಾರು ೪೮ ಪ್ರಯಾಣಿಕರಿದ್ದರು.
ಇಂದು ನಸುಕಿನ ಜಾವ 3 ಗಂಟೆಗೆ ದುರ್ಘಟನೆ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್ ಅಪಘಾತದಲ್ಲಿ ಮೃತರ ಸಂಖ್ಯೆ 20 ಕ್ಕೆ ಏರಿಕೆ. 15 ಪುರುಷರು, ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅವಿನಾಶಿ ಉಪ ತಹಶೀಲ್ದಾರ್ ಖಚಿತಪಡಿಸಿದ್ದಾರೆ.
Chief Minister's Office (CMO) Kerala on bus-truck collision in Tamil Nadu's Tirupur dist: CM Pinarayi Vijayan has instructed Dist Collector of Palakkad to provide emergency medical care to the victims of the accident. Procedures to identify the deceased are in progress.(file pic) pic.twitter.com/e8RHfuAy1D
— ANI (@ANI) February 20, 2020
ಅಪಘಾತ ಸಂಭವಿಸಿದ ಬೆನ್ನಲ್ಲೇ ಲಾರಿ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯಲ್ಲಿ ಕ್ಲೀನರ್ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/1-3.jpg)