ಕೆಎಸ್​ಆರ್​ಟಿಸಿ ಬಸ್​ ಅಪಘಾತ: 20 ಮಂದಿ ಸಾವು

ತಿರ್ಪೂರ್: 

     ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೊರಟಿದ್ದ ಕೇರಳ ರಾಜ್ಯ ಸಾರಿಗೆ ಬಸ್​​ವೊಂದು ತಿರ್ಪೂರ್​ ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಟ್ರಕ್​ಗೆ ಗುದ್ದಿದ ಪರಿಣಾಮ 20 ಮಂದಿ ಸಾವಿಗೀಡಾಗಿದ್ದಾರೆ  ಬಸ್ ನಲ್ಲಿ ಸುಮಾರು ೪೮ ಪ್ರಯಾಣಿಕರಿದ್ದರು.

    ಇಂದು ನಸುಕಿನ ಜಾವ 3 ಗಂಟೆಗೆ ದುರ್ಘಟನೆ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್​ ಸಂಪೂರ್ಣ ನುಜ್ಜುಗುಜ್ಜಾಗಿದೆ.  ಬಸ್ ಅಪಘಾತದಲ್ಲಿ ಮೃತರ ಸಂಖ್ಯೆ 20 ಕ್ಕೆ ಏರಿಕೆ. 15 ಪುರುಷರು, ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅವಿನಾಶಿ ಉಪ ತಹಶೀಲ್ದಾರ್ ಖಚಿತಪಡಿಸಿದ್ದಾರೆ.

  ಅಪಘಾತ ಸಂಭವಿಸಿದ ಬೆನ್ನಲ್ಲೇ  ಲಾರಿ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯಲ್ಲಿ ಕ್ಲೀನರ್​ ಸಾವಿಗೀಡಾಗಿದ್ದಾನೆ  ಎಂದು ತಿಳಿದುಬಂದಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap