ಬಾಗಲಕೋಟೆ ​​: ಭೀಕರ ರಸ್ತೆ ಅಪಘಾತ ; ಮೂವರ ದುರ್ಮರಣ

ಬಾಗಲಕೋಟೆ: 

   ಜಿಲ್ಲೆಯ ಕಮತಗಿ ಗ್ರಾಮದ ಬಳಿ ಅಪರಿಚಿತ ವಾಹನವೊಂದು ಟಂಟಂ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ  ಘಟನೆ  ಕಳೆದ ರಾತ್ರಿ  ಜಿಲ್ಲೆಯ ಕಮತಗಿ ಗ್ರಾಮದ ಬಳಿ  ಜರುಗಿದೆ.

   ನೇಕಾರ ಕಾಲೋನಿ‌ ಬಳಿ ಈ ದುರ್ಘಟನೆ ನಡೆದಿದ್ದು , ಸ್ಥಳದಲ್ಲಿ ಟಂಟಂ ಆಟೋ ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

  ಬಸು ಚಿನ್ನಪ್ಪ ತೋರಗಲ್ಲ (26), ಸಂಗಮೇಶ ಬಸವರಾಜ್ ಕಿತ್ತಲಿ(25), ಸ್ಥಳದಲ್ಲಿಯೇ ಮೃತಪಟ್ಟಿದವರು , ವಿಠ್ಠಲ ವಗ್ಗಾ (23) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ‌ಪಟ್ಟಿದ್ದಾರೆ ಎನ್ನಲಾಗಿದೆ. ಈ  ಕಮತಗಿಯಿಂದ ಗುಳೇದಗುಡ್ಡಕ್ಕೆ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.  ಅಮೀನಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap